ಪುತ್ತೂರು: ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಮಾರು ೨೫ ಕುಟುಂಬಗಳಿಗೆ1993 ರಲ್ಲಿ ನಿವೆಶನದ ಹಕ್ಕು ಪತ್ರ ನೀಡಲಾಗಿತ್ತು, ಹಕ್ಕು ಪತ್ರ ನೀಡಲಾಗಿತ್ತೇ ವಿನಾ ಅವರಿಗೆ ನಿವೇಶನ ಗುರುತು ಮಾಡಿರಲಿಲ್ಲ, ನಿವೇಶನಕ್ಕಾಗಿ ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಮಾಡಿದರೂ ಫಲನೀಡಲಿಲ್ಲ, ಕೊನೆಗೆ ಪುತ್ತೂರು ಶಾಸಕರ ಒಂದೇ ಒಂದು ಫೋನ್ ಕರೆಗೆ ಎಚ್ಚರಗೊಂಡ ಅಧಿಕಾರಿಗಳು 25 ಮಂದಿಯಲ್ಲಿ ಏಳು ಮ0ದಿಗೆ ಮೊದಲ ಹಂತದ ನಿವೇಶನವನ್ನು ನೀಡಿದ್ದಾರೆ.
ಐತ್ತೂರು ಗ್ರಾಮದ ಹನುಮಂತನ್, ವರದರಾಜ್, ತ್ಯಾಗಮೂರ್ತಿ, ಪಾರ್ಥೀವನ್, ಜಯಕುಮಾರ್, ಕುಮಾರ್ ಪಿ, ಹಾಗೂ ಜಿ ರವಿ ಎಂಬವರಿಗೆ ನಿವೇಶನ ನೀಡಲಾಗಿದೆ. ಹಕ್ಕು ಪತ್ರ ಪಡೆದುಕೊಂಡವರ ಪೈಕಿ ಕೆಲವರು ಮರಣಹೊಂದಿದ್ದಾರೆ. ಇವರಿಗೆ ವಿನಯಕುಮಾರ್ ಸೊರಕೆಯವರು ಪುತ್ತೂರು ಶಾಸಕರಾಗಿದ್ದ ಸಂದರ್ಬದಲ್ಲಿ ಹಕ್ಕು ಪತ್ರವನ್ನು ನೀಡಲಾಗಿತ್ತು. ಐತ್ತೂರು ಗ್ರಾಮ ಆಗಿನ ಕಾಲದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿತ್ತು. ಹಕ್ಕು ಪತ್ರ ಪಡೆದುಕೊಂಡ ೨೫ ಕುಟುಂಬಗಳಿಗೆ ನಿವೇಶನ ನೀಡಿರಲಿಲ್ಲ. ನಿವೇಶನ ಕೊಡಿ ಎಂದು ಕಳೆದ 25 ವರ್ಷಗಳಿಂದ ಸಿಕ್ಕ ಸಿಕ್ಕವರಲ್ಲಿ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಶಾಸಕ ಅಶೋಕ್ ರೈಗೆ ದೂರು
ಈ ಬಗ್ಗೆ ಐತ್ತೂರು ಗ್ರಾಪಂ ಸದಸ್ಯರಾದ ಈರೇಶ್ ಗೌಡರವರು ಫಲಾನುಭವಿಗಳನ್ನು ಕರೆದುಕೊಂಡು ಪುತ್ತೂರು ಶಾಕರಾದ ಅಶೋಕ್ ರೈ ಕಚೇರಿಗೆ ಬಂದಿದ್ದರು. ಶಾಸಕರಲ್ಲಿ ವಿಷಯ ತಿಳಿಸಿದಾಗ ಸಂಬoಧಿಸಿದ ಅಧಿಕಾರಿಗೆ ಕರೆ ಮಾಡಿದ ಶಾಸಕರು ಯಾರಿಗೆಲ್ಲಾ 1993 ರಲ್ಲಿ ಹಕ್ಕು ಪತ್ರವನ್ನು ನೀಡಲಾಗಿದೆಯೋ ಅವರಿಗೆಲ್ಲಾ ನಿವೇಶನವನ್ನು ಯಾಕೆ ಕೊಟ್ಟಿಲ್ಲ? 25 ವರ್ಷಗಳಿಂದ ಅವರನ್ನು ಯಾಕೆ ಸತಾಯಿಸ್ತಿದ್ದೀರಿ, ನಿವೇಶನ ಇಲ್ಲದೇ ಇದ್ದರೆ ಹಕ್ಕು ಪತ್ರವನ್ನು ಯಾಕೆ ಕೊಟ್ಟಿದ್ದೀರಿ? ಇದಕ್ಕೆ ಸಂಬoಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಹೇಳಿದ್ದ ಶಾಸಕರು ತಕ್ಷಣವೇ ಎಲ್ಲಾ ೨೫ ಮಂದಿ ಕುಟುಂಬಸ್ಥರಿಗೆ ನಿವೇಶನ ನೀಡುವಂತೆ ಸೂಚಿಸಿದ್ದರು. ಈ ಬಗ್ಗೆ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಅವರು ಈ ಫಲಾನುಭವಿಗೆ ನೆರವಾಗಿದ್ದರು. ಅಧಿಕಾರಿಗಳ ಬಳಿ ಫಲಾನುಭವಿಗಳನ್ನು ಕರೆದುಕೊಂಡು ಹೋಗಿ ಅಲ್ಲಿ ದಾಖಲೆಗಳನ್ನು ನೀಡಿ ಶಾಸಕರ ಸೂಚನೆಯಂತೆ ಶೀಘ್ರವೇ ನಿವೇಶನ ಮಂಜೂರುಗೊಳಿಸುವಲ್ಲಿ ಸಹಕಾರವನ್ನು ನೀಡಿದ್ದರು.
ಹಕ್ಕು ಪತ್ರ ನೀಡಿದ್ದಾರೆ ನಿವೇಶನ ನೀಡಿಲ್ಲ ಎಂದು ಐತ್ತೂರು ಗ್ರಾಮದ 25 ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ಬಡವರಿಗೆ ಮನೆ ಕಟ್ಟಲು ಜಾಗದ ಹಕ್ಕು ಪತ್ರವನ್ನು ನೀಡಿದ್ದಾರೆ. ಅಂದಿನ ಶಾಸಕರಾಗಿದ್ದ ವಿನಯಕುಮಾರ್ ಸೊರಕೆಯವರು ಬಡವರಿಗೆ ಸಹಾಯವಾಗಲೆಂದು ಹಕ್ಕು ಪತ್ರವನ್ನು ನೀಡಿದ್ದರು. ಆದರೆ ಹಕ್ಕು ಪತ್ರ ನೀಡಿದ ಬಳಿಕ ನಿವೇಶನ ನೀಡುವ ಕೆಲಸವನ್ನು ಇಲಾಖಾ ಅಧಿಕಾರಿಗಳು ಮಾಡಬೇಕಿತ್ತು. ಯಾಕೆ ಆರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಗಮನಕ್ಕೆ ಈ ವಿಚಾರ ಬಂದ ಕೂಡಲೇ ಸ್ಪಂದಿಸಿದ್ದೇನೆ. ಪ್ರಥಮ ಹಂತದಲ್ಲಿ 7 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಹಕ್ಕು ಪತ್ರ ಕೆಲವು ಮರಣಹೊಂದಿದ್ದಾರೆ. ಹಕ್ಕು ಪತ್ರ ಪಡೆದ ಎಲ್ಲರಿಗೂ ನಿವೇಶನ ನೀಡುವಂತೆ ಸೂಚನೆಯನ್ನು ನೀಡಿದ್ದೇನೆ. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹಾಗೂ ಗ್ರಾಪಂ ಸದಸ್ಯ ಈರೇಶ್ರವರು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.- ಅಶೋಕ್ ರೈ ಶಾಸಕರು, ಪುತ್ತೂರು
ಅದ್ಬುತ ಕೆಲಸ ಶಾಸಕರಿಂದ ಆಗಿದೆ; ಬಡಗನ್ನೂರು
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕ ಅಶೋಕ್ ರೈ ಅವರಿಂದ ಅದ್ಬುತ ಕೆಲಸವಾಗಿದೆ. ಇದು ಆಗುತ್ತದೆ, ನಿವೇಶನ ಸಿಗುತ್ತದೆ ಎಂಬ ಆಸೆಯನ್ನೇ ಬಿಟ್ಟಿದ್ದರು. ೨೫ ವರ್ಷಗಳಿಂದ ಬಡ ಕುಟುಂಬಗಳು ಮಾಡಿದ ಹೋರಾಟಕ್ಕೆ ಶಾಸಕರಿಂದ ನ್ಯಾಯ ಸಿಕ್ಕಿದೆ.ಇಂದು ಆ ಕುಟುಂಬಗಳಿಗೆ ಆಗಿರುವ ಸಂತೋಷ ಅಷ್ಟಿಷ್ಟಲ್ಲ. ಒಬ್ಬ ಜನಪ್ರತಿನಿಧಿಯಾದವರು ಹೇಗೆ ಸಹಾಯ ಮಾಡಬಹುದು, ಬಡವರ ಕಣ್ಣೀರೊರೆಸಬಹುದು ಎಂಬುದಕ್ಕೆ ಶಾಸಕರು ನಿದರ್ಶನವಾಗಿದ್ದಾರೆ ಎಂದು ಆಬಿಪ್ರಾಯಿಸಿದರು.
ಯಾರಿದಂಲೂ ಆಗದ್ದು ಶಾಸಕರು ಮಾಡಿದ್ದಾರೆ: ಫಝಲ್ ಕೋಡಿಂಬಾಳ
ಕಳೆದ ೨೫ ವರ್ಷಗಳಿಂದ ಗ್ರಾಪಂ ಸದಸ್ಯ ಈರೇಶ್ ಗೌಡ, ಕೃಷ್ಣಪ್ಪ ಸೇರಿದಂತೆ ಹಲವು ಮಂದಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದರು ಆದರೆ ನ್ಯಾಯ ಸಿಕ್ಕಿರಲಿಲ್ಲ, ಪುತ್ತೂರು ಶಾಸಕರ ಬಳಿ ನಮಗೆ ನ್ಯಾಯ ಸಿಕ್ಕಿದೆ, ಬಡವರಿಗೆ ಸ್ಪಂದನೆ ನೀಡುವ ಶಾಅಸಕರ ಮನೋಸ್ಥಿತಿ ಕಂಡು ನಮಗೂ ಅಚ್ಚರಿಯಾಗಿದೆ, ಯಾರಿದಂಲೂ ಮಾಡಲಾಗದ ಒಂದು ಪುಣ್ಯದ ಕೆಲಸವನ್ನು ಮಾಡಿರುವುದು ಅಭಿನಂದನಾರ್ಹವಾಗಿದೆ ಎಂದು ಮಾಜಿ ತಾಪಂ ಸದಸ್ಯ ಫಝಲ್ ಕೋಡಿಂಬಾಳ ಅಭಿಪ್ರಾಯಿಸಿದ್ದಾರೆ.
ಶಾಸಕರಿಗೆ ಅಭಿನಂದನೆ
ನಿವೇಶನ ಸಿಕ್ಕಿದ ಫಲಾನುಭವಿಗಳು ಸೋಮವಾರ ಶಾಸಕರ ಕಚೇರಿಗೆ ಬಂದು ಶಾಸಕರಿಗೆ ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ. ಶಾಸಕರ ಕಾಲಿಗೆ ನಮಸ್ಕರಿಸಿದ ಫಲಾನುಭವಿಗಳು ನೀವು ನಮ್ಮ ಪಾಲಿನ ದೇವರಾಗಿ ಬಂದಿದ್ದೀರಿ, ನಾವು ನಿಮ್ಮ ಕ್ಷೇತ್ರದವರೇ ಅಲ್ಲ, ನಾವು ನಿಮಗೆ ವೋಟು ಕೂಡಾ ಹಾಕಿಲ್ಲ, ಹಾಕಲು ಸಾಧ್ಯವೂ ಇಲ್ಲ ಆದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ನಮ್ಮ ಮನವಿಗೆ ಸ್ಪಂದಿಸಿ 25 ವರ್ಷಗಳಿಂದ ಯಾರಿಂದಲೂ ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡಿ ನಮ್ಮ ಕುಟುಂಬದ ಕಣ್ಣೀರು ಒರೆಸಿದ್ದೀರಿ, ನಿಮ್ಮ ಸೇವೆಯನ್ನು ನಾವು ಎಂದಿಗೂ ಮರೆಯಲಾರೆವು, ನಿಮ್ಮ ಹೆಸರು ಹೇಳಿ ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಯುವಕ ಕಾಂಗ್ರೆಸ್ ಅಧ್ಯಕ್ಷರಾದ ಶಾಕಿರ್ ಇದ್ದರು.