ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಕಾರಿಂಜ ಅಣ್ಣಪ್ಪ ಮೂಲ್ಯರವರ ಪುತ್ರಿ,ಬಂಟ್ವಾಳ ಜಕ್ರಿಬೆಟ್ಟು ನಮೋ ನಿವಾಸ ಪ್ರೇಮನಾಥ್ ಕುಲಾಲ್ ಇವರ ಪತ್ನಿ ಸುಮಿತ್ರಾ (38ವ) ಅನಾರೋಗ್ಯದಿಂದ ಬಳಲಿ ಜೂ.4 ರಂದು ನಿಧನರಾದರು.
ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಿತ್ರಾ ಅವರಿಗೆ ಹಲವಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ವಿದ್ಯಾರ್ಥಿ ಜೀವನದಲ್ಲೇ ಪ್ರತಿಭಾವಂತೆಯಾಗಿದ್ದ ಸುಮಿತ್ರಾ ಎಂ.ಎಸ್.ಡಬ್ಲ್ಯೂ ಪದವೀಧರೆ. ಸಾಧು ಸ್ವಭಾವದ ವ್ಯಕ್ತಿತ್ವದ ಇವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.
ಮೃತರು ಪತಿ ಪ್ರೇಮನಾಥ್ ಕುಲಾಲ್, ಸಣ್ಣ ಮಗು ಯಾನ್ಸ್, ಸಹೋದರ ಸಹೋದರಿ ಹಾಗೂ ಅಪಾರ ಪ್ರಮಾಣದ ಕುಟುಂಬ ವರ್ಗದವರನ್ನು, ಬಂದು ಬಳಗವನ್ನು ಅಗಲಿದ್ದಾರೆ.