ಪುತ್ತೂರು: ಪ್ರತಿಷ್ಠಿತ ಸಂಸ್ಥೆ ಯು ಆರ್ ಪ್ರಾಪರ್ಟೀಸ್ ನ ಬಹು ಕನಸಿನ ಪುತ್ತೂರಿನ ಅತೀ ದೊಡ್ಡ ಲೇ ಔಟ್ ಬೆದ್ರಾಳ ಶ್ರೀಮಾ ಥೀಮ್ ಪಾರ್ಕ್ ಪುಡಾ ದಿಂದ ಅಪ್ರೂವ್ ಆಗಿದ್ದು ಇದೀಗ ನಾಗನ ಕೃಪೆಯು ದೊರೆತಿದೆ.
ತಿಂಗಳುಗಳ ಹಿಂದೆ ಇದೆ ಪರಿಸರದಲ್ಲಿ ನಾಗ ಪ್ರತಿಷ್ಠೆ ಮಾಡಿ ಭಕ್ತಿ ಪೂರ್ವಕವಾಗಿ ಅದ್ದೂರಿ ಕಾರ್ಯಕ್ರಮಗಳನ್ನು ಮಾಡಲಾಗಿತ್ತು.
ಇದೀಗ ಲೇ ಔಟ್ ಅಪ್ರೂವ್ ಆಗುತ್ತಿದ್ದಂತೆ ಕಚೇರಿಯಲ್ಲಿ ನಾಗನ ದರ್ಶನವಾಗಿದೆ. ಕಚೇರಿಗೆ ಬಂದ ಸರ್ಪ ಹಲವು ಗಂಟೆಗಳ ಕಾಲ ಅಲ್ಲೆ ಇದ್ದು ಕುತೂಹಲ ಮಾಡಿಸಿತ್ತು.
ಯು ಆರ್ ಪ್ರಾಪರ್ಟೀಸ್ ನ ಸಂಸ್ಥೆಗೆ ಸರ್ಪವೊಂದು ಬಂದಿದ್ದು ಅಲ್ಲಿನ ಕನಸಿನ ಲೇ ಔಟ್ ಅಪ್ರೂವ್ ಆದ ದಿನವೇ ಬಂದಿರುವುದು ನಾಗ ದೇವರ ಆಶೀರ್ವಾದ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಸದ್ಯ ಸರ್ಪವನ್ನು ಉರಗ ತಜ್ಞರು ರಕ್ಷಿಸಿ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.