ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಕೇಸ್ ಸದ್ಯ ಎನ್ ಐ ಎ ಗೆ ಹಸ್ತಾಂತರಿಸಿದ್ದು ಎನ್ಐಎ ಅಧಿಕಾರಿಗಳು ‘ಫಂಡಿಂಗ್’ ಪಾಯಿಂಟ್ ತನಿಖೆಗಿಳಿದಿದ್ದಾರೆ.
ಸುಹಾಸ್ ಹತ್ಯೆ ಕೇಸ್ ನಲ್ಲಿ ಬಂಧಿತರ ಬ್ಯಾಂಕ್ ಖಾತೆಗಳಿಗೆ ವಿದೇಶಿ ಫಂಡಿಂಗ್ ಇರುವ ಬಗ್ಗೆ ತನಿಕೆ ನಡೆಸುತ್ತಿದ್ದಾರೆ. ಎಲ್ಲಾ 12 ಆರೋಪಿಗಳ ಬೇರೆ ಬೇರೆ ಬ್ಯಾಂಕ್ ಗಳ ವಿವರ ಸಂಗ್ರಹಿಸುತ್ತಿದ್ದು ಕೆಲ ಸ್ಥಳೀಯ ವ್ಯಕ್ತಿಗಳಿಂದಲೂ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ರವಾನೆಯಾದ ಮಾಹಿತಿ ಲಭ್ಯವಾಗಿದೆ.
ಸುಹಾಸ್ ಶೆಟ್ಟಿ ಪ್ರಕರಣದ ಅಳಕ್ಕಿಳಿದು ತನಿಖೆ ಆರಂಭಿಸಿದ ಎನ್ಐಎ ಅಧಿಕಾರಿಗಳು ಪ್ರಕರಣದ ಸಂಪೂರ್ಣ ಮಾಹಿತಿ ಪಡೆದ NIA ಡಿಐಜಿ ರಾಹುಲ್ ಹಾಗು ಎಸ್ಪಿ ಶಿವಕುಮಾರ್ ಅವರು ಪಡೆದುಕೊಂಡಿದ್ದಾರೆ.
ತನಿಖೆ ನಡೆಸುತ್ತಿರುವ NIA ಡಿಎಸ್ಪಿ ಪವನ್ ಕುಮಾರ್ ನೇತೃತ್ವದ ತಂಡಕ್ಕೆ ಸುಹಾಸ್ ಹತ್ಯೆಯಲ್ಲಿ ಭಾಗಿಯಾದ ಬಹುತೇಕರಿಗೆ ನಿಷೇಧಿತ ಪಿಎಫ್ಐ ನಂಟಿಗೆ ಸಾಕ್ಷ್ಯ ಲಭ್ಯವಾಗಿದ್ದು ಪಿಎಫ್ಐ ಜೊತೆ ಗುರುತಿಸಿಕೊಂಡು ವಿದೇಶದಲ್ಲಿರೋ ಕೆಲವರಿಂದ ಹತ್ಯೆಗೆ ಹಣಕಾಸು ನೆರವಿನ ಅಂಶ ಬೆಳಕಿಗೆ ಬಂದಿದೆ.
ಸದ್ಯ 12 ಜನ ಆರೋಪಿಗಳ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರೋ ಎನ್ಐಎ ಗೆ
ಮಂಗಳೂರು ಹಾಗೂ ವಿದೇಶದಲ್ಲಿ ಕೂತಿರೋ ಕೆಲವರ ಹೆಸರನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಹತ್ಯೆಗೆ ನೆರವು ನೀಡಿದ ಮತ್ತೊಂದಷ್ಟು ಜನರ ಖಚಿತ ಮಾಹಿತಿ ಕಲೆ ಹಾಕಿರೋ ಎನ್ಐಎ ನಿಗೂಢ ವ್ಯಕ್ತಿಗಳ ಬಂಧನಕ್ಕೆ ಬಲೆ ಬೀಸಿದೆ.