ಬೆಳ್ತಂಗಡಿ: ದುಬೈ ಬಿಲ್ಲವಾಸ್ ಫ್ಯಾಮಿಲಿ ವತಿಯಿಂದ ಬಿಲ್ಲವ ವೈಭವ ಕಾರ್ಯಕ್ರಮ ಅ. 26ರಂದು ಬೆಳಿಗ್ಗೆ 9.30ರಿಂದ 5.30ರವರೆಗೆ ದುಬೈನ ಶೇಕ್ ಝಾಯಿದ್ ರಸ್ತೆಯಲ್ಲಿರುವ ಡೌನ್ ಟೌನ್ ಹೋಟೆಲ್ ನ ಮಿಲೇನಿಯಂ ಪ್ಲಾಝಾದಲ್ಲಿ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ನೃತ್ಯ, ಸಂಗೀತ ಮನೋರಂಜನೆ ಸಹಿತ ವಿಭಿನ್ನ ರೀತಿಯ ಕಾರ್ಯಕ್ರಮ ನಡೆಯಲಿದೆ.
ಸದ್ಯ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪ್ರಜ್ಞಾ ರವರು ತನ್ನ ಉತ್ತಮ ನಿರೂಪಣೆ ಮೂಲಕ ಜನಮನ ಗೆದ್ದಿದ್ದಾರೆ ಇದೀಗ ವಿದೇಶದಲ್ಲಿಯೂ ತನ್ನ ಛಾಪು ಮೂಡಿಸಲಿದ್ದಾರೆ.