Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

    ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

    ಸುರತ್ಕಲ್: ಇಬ್ಬರಿಗೆ ಚೂರಿ ಇರಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು…!

    ಸುರತ್ಕಲ್: ಇಬ್ಬರಿಗೆ ಚೂರಿ ಇರಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು…!

    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

    ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

    ಸುರತ್ಕಲ್: ಇಬ್ಬರಿಗೆ ಚೂರಿ ಇರಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು…!

    ಸುರತ್ಕಲ್: ಇಬ್ಬರಿಗೆ ಚೂರಿ ಇರಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು…!

    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಪೊಲೀಸ್ ಇಲಾಖೆಗೆ ಸೇರುವಂತೆ ಉತ್ತೇಜಿಸಲು ನಗದು ಬಹುಮಾನ ಘೋಷಿಸಿದ ಪೊಲೀಸ್ ಅಧಿಕಾರಿ:; ಪಿ.ಎಸ್.ಐ ಲಿಖಿತ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರದ ಜೊತೆ ನಗದು ಬಹುಮಾನ

August 29, 2021
in ಪುತ್ತೂರು
0
ಪೊಲೀಸ್ ಇಲಾಖೆಗೆ ಸೇರುವಂತೆ ಉತ್ತೇಜಿಸಲು ನಗದು ಬಹುಮಾನ ಘೋಷಿಸಿದ ಪೊಲೀಸ್ ಅಧಿಕಾರಿ:; ಪಿ.ಎಸ್.ಐ ಲಿಖಿತ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರದ ಜೊತೆ ನಗದು ಬಹುಮಾನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹುದ್ದೆಯ 2021ರ ಸಾಲಿನ ನೇಮಕಾತಿಗೆ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಉಚಿತ ತರಬೇತಿಯನ್ನು ವಿದ್ಯಾಮಾತ ಅಕಾಡೆಮಿ ಆಯೋಜಿಸಿದೆ. ಈ ತರಬೇತಿಯು ಒಂದು ತಿಂಗಳ ಅವಧಿಯದಾಗಿದ್ದು ಸೆಪ್ಟಂಬರ್ 01 ರಿಂದ ಆರಂಭವಾಗಲಿದೆ.

Advertisement
Advertisement
Advertisement

ಸೋಮವಾರದಿಂದ ಶುಕ್ರವಾರದ ವರೆಗೆ ವಾರದ ಐದು ದಿನ ಬೆಳಗ್ಗೆ 9 ಘಂಟೆಯಿಂದ ಮಧ್ಯಾಹ್ನ 1 ಘಂಟೆಯವರೆಗೆ ತರಬೇತಿ ತರಗತಿ ನಡೆಯಲಿದೆ.

Advertisement

ಪ್ರತಿ ದಿನ ಗಂಟೆಗೊಂಡರಂತೆ ನಾಲ್ಕು ವಿಷಯಗಳಿಗೆ ಸಂಬಂಧಿಸಿ ಒಟ್ಟು ನಾಲ್ಕು ತರಗತಿಗಳು ನಡೆಯಲಿವೆ. ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ ಮತ್ತು ಪ್ರಚಲಿತ ಘಟನೆ ಇಷ್ಟು ವಿಷಯಗಳ ಬಗ್ಗೆ ತರಗತಿಗಳು ನಡೆಯುತ್ತವೆ.ಸಾಯಂಕಾಲ 06ರಿಂದ 08ರವರೆಗೆ 2 ಘಂಟೆಗಳ ಆನ್ಲೈನ್ ತರಗತಿಗಳು (ಮಾನಸಿಕ ಸಾಮರ್ಥ್ಯ +ಅರ್ಥಶಾಸ್ತ್ರ+ಭೂಗೋಳ,) ದಿನಂಪ್ರತಿ ನಡೆಯುತ್ತವೆ.
ವಾರಾಂತ್ಯದ ದಿನ ಗುಂಪು ಚರ್ಚೆಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಕಾರ್ಯಾಗಾರ, ಪ್ರಾಯೋಗಿಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

Advertisement
Advertisement

ಈ ತರಬೇತಿಯ ಪ್ರಯೋಜನವನ್ನು ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಮುಕ್ತವಾಗಿ ಪಡೆದುಕೊಳ್ಳುವ ಅವಕಾಶವಿದೆ. PSI ದೈಹಿಕ ಕ್ಷಮತೆ ಪರೀಕ್ಷೆ ತೇರ್ಗಡೆ ಹೊಂದಿದ ಅಭ್ಯರ್ಥಿಗಳಲ್ಲದೆ ಈಗ ಪದವಿ ಮತ್ತು ಪದವೀ ಪೂರ್ವ ಶಿಕ್ಷಣ ಪಡೆಯುತ್ತಿರುವ ಮುಂದೆ ಪೊಲೀಸ್ ಇಲಾಖೆಗೆ ಸೇರುವ ಗುರಿ ಹೊಂದಿದ್ದು, ಅದಕ್ಕಾಗಿ ಪೂರ್ವತಯಾರಿ ನಡೆಸುವ ಉದ್ದೇಶ ಹೊಂದಿದವರಿದ್ದಲ್ಲಿ ಖುದ್ದು ಬಂದು ಮನವಿ ನೀಡಿದಲ್ಲಿ ಕೆಲ ಮಾನದಂಡಗಳ ಆಧಾರದಲ್ಲಿ ತರಬೇತಿಗೆ ಅವಕಾಶವಿದೆ.

ಈ ತರಬೇತಿಗೆ ಸಂಬಂಧಿಸಿ ಸೆಪ್ಟೆಂಬರ್ 15ರಂದು ಮಾದರಿ ಪ್ರಶ್ನೆ ಪತ್ರಿಕೆ 1 ಮತ್ತು 2 ರ ಪರೀಕ್ಷೆ ವಿದ್ಯಾಮಾತ ಅಕಾಡೆಮಿ ನಡೆಸಲಿದೆ. ಮಾದರಿ ಪ್ರಶ್ನೆ ಪತ್ರಿಕೆ 01 – 50 ಅಂಕ (ಪ್ರಬಂಧ+ಭಾಷಾಂತರ+ಸಂಕ್ಷಿಪ್ತ ಬರವಣಿಗೆ), ಮಾದರಿ ಪ್ರಶ್ನೆ ಪತ್ರಿಕೆ 2-150 ಅಂಕ (ಸೂಕ್ತ ಉತ್ತರವನ್ನು ಗುರುತಿಸುವುದು).

ಪೊಲೀಸ್ ನೇಮಕಾತಿಯಲ್ಲಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ವಿದ್ಯಾಮಾತ ಅಕಾಡೆಮಿ ಆಯೋಜಿಸಿರುವ ಲಿಖಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಅಭ್ಯರ್ಥಿಗಳಿಗೆ ಬೆಳ್ಳಾರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿರವರು ಬಹುಮಾನವನ್ನು ಪ್ರಾಯೋಜಿಸಿದ್ದು ನಗದು ಬಹುಮಾನ ನೀಡಲಿದ್ದಾರೆ.50 ಅಂಕಗಳ ಪ್ರಶ್ನೆ ಪತ್ರಿಕೆ 1 ಕ್ಕೆ ಪ್ರಥಮ ಬಹುಮಾನ 3000 ಮತ್ತು ದ್ವಿತೀಯ 2000 ರೂಪಾಯಿಗಳು ಹಾಗೂ 150 ಅಂಕಗಳ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ 2 ಕ್ಕೆ ಪ್ರಥಮ 5000, ದ್ವಿತೀಯ 3000 ಹಾಗೂ ತೃತೀಯ 2000 ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ದೂರದ ಊರಿನ ಅಭ್ಯರ್ಥಿಗಳಿಗೆ ವಸತಿಗೆ ಸಹಕಾರ ಬೇಕಾದಲ್ಲಿ ಮಾಡಲಾಗುವುದು ಎಂದು ವಿದ್ಯಾಮಾತ ಅಕಾಡೆಮಿ ಮುಖ್ಯಸ್ಥರು ತಿಳಿಸಿದ್ದಾರೆ.

“ಪೊಲೀಸ್ ಇಲಾಖೆ ಸೇರಿದಲ್ಲಿ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತದೆ. ಉತ್ತಮ ಶ್ರೇಣಿಯ ವೇತನ, ಮನೆ, ಆರೋಗ್ಯ ಭಾಗ್ಯದಂತಹ ಯೋಜನೆಗಳು ಲಭಿಸುತ್ತದೆ. ನಮಗೆ, ನಮ್ಮ ಕುಟುಂಬಕ್ಕೆ ಮನೆತನಕ್ಕೆ ಒಂದು ಗೌರವವನ್ನು ಪೊಲೀಸ್ ಇಲಾಖೆ ಮುಖಾಂತರ ಲಭಿಸುತ್ತದೆ. ಕಠಿಣ ಪರಿಶ್ರಮ ಹಾಕಿ ಓದಿ ಆಯ್ಕೆಯಾಗಿ ನಿಮ್ಮದೇ ಊರಿನ, ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಬಂದು ನಿಮ್ಮ ಊರಿನ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವ ಪರಿಹಾರ ಮಾಡುವ ಉತ್ತಮ ಆಡಳಿತ ನಡೆಸುವ ಕಾರ್ಯವನ್ನು ಮಾಡಬೇಕಾಗಿದೆ” ಎಂದು ಈ ಸಂದರ್ಭದಲ್ಲಿ ಆಂಜನೇಯ ರೆಡ್ಡಿಯವರು ತಾವು ವಿದ್ಯಾಮಾತ ಅಕಾಡೆಮಿಯೊಂದಿಗೆ ಕಾರ್ಯಕ್ರಮ ಪ್ರಾಯೋಜಿಸುತ್ತಿರುವ ಉದ್ದೇಶವನ್ನು ವಿವರಿಸಿದ್ದಾರೆ.

ಆಂಜನೇಯ ರೆಡ್ಡಿ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಹುಟ್ಟಿ ಶಿಕ್ಷಣ ಪಡೆದು 2005 ರಲ್ಲಿ ಪೊಲೀಸ್ ನೇಮಕಾತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿಕೊಂಡವರು. ಸುಮಾರು 12 ವರ್ಷಗಳ ಕಾಲ ಬಾಗೇಪಲ್ಲಿ, ಗೌರೀ ಬಿದನೂರು, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆ ಬಳಿಕ 2016 ರಲ್ಲಿ PSI ಪರೀಕ್ಷೆ ಬರೆದು 2017ರ ಬ್ಯಾಚ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾದವರು.

ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುವುದರಿಂದ ಈ ಭಾಗದ ಜನ ಹೆಚ್ಚು ಹೆಚ್ಚು ಪೊಲೀಸ್ ಇಲಾಖೆಗೆ ಸೇರಿಕೊಳ್ಳಬೇಕೆಂಬ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ದೈಹಿಕ ಕ್ಷಮತೆ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾಮಾತ ಅಕಾಡೆಮಿ ನಡೆಸುವ ಲಿಖಿತ ಮಾದರಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸುವ ಅಭ್ಯರ್ಥಿಗಳಿಗೆ ನಗದು ಬಹುಮಾನವನ್ನು ಪ್ರಾಯೋಜಿಸಿದ್ದಾರೆ.

ಒಂದು ತಿಂಗಳ ಉಚಿತ ತರಬೇತಿ ಪಡೆಯಲು ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರಮಾಣ ಪತ್ರದೊಂದಿಗೆ ಖುದ್ದಾಗಿ ವಿದ್ಯಾಮಾತ ಅಕಾಡೆಮಿಯಲ್ಲಿ ದಿನಾಂಕ 01-09-2021 ರ ಒಳಗಾಗಿ ಹೆಸರು ನೋಂದಾಣಿ ಮಾಡಬೇಕು.
ಉಚಿತ ತರಬೇತಿ ಪ್ರಾರಂಭ ದಿನಾಂಕ:ಸೆಪ್ಟೆಂಬರ್ 01-2021 . ಮಾದರಿ ಪ್ರಶ್ನೆ ಪತ್ರಿಕೆ ಪರೀಕ್ಷಾ ದಿನಾಂಕ-15-ಸೆಪ್ಟೆಂಬರ್ 2021 . ಮಾದರಿ ಪ್ರಶ್ನೆ ಪತ್ರಿಕೆಯ ಪರೀಕ್ಷೆಯಲ್ಲಿ ಭಾಗವಹಿಸಲು ದಿನಾಂಕ 10-ಸೆಪ್ಟೆಂಬರ್ 2021 ರ ಒಳಗಾಗಿ ಹೆಸರು ನೋಂದಾಣಿ ಮಾಡಬೇಕು.

ವಿಳಾಸ:
ವಿದ್ಯಾಮಾತ ಅಕಾಡೆಮಿ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ
1ನೇ ಮಹಡಿ, ಹಿಂದುಸ್ತಾನ ಕಾಂಪ್ಲೆಕ್ಸ್, ಸಿಟಿ ಆಸ್ಪತ್ರೆ ಬಳಿ, ಎ. ಪಿ.ಎಂ.ಸಿ ರಸ್ತೆ, ಪುತ್ತೂರು. ದಕ್ಷಿಣ ಕನ್ನಡ – 574201
ಸಂಪರ್ಕ: 8590773486, 9620468869

Advertisement
Advertisement
Previous Post

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣವಾಗಿರುವ ಹಿನ್ನೆಲೆ:; ವೀಕೆಂಡ್ ಕರ್ಫ್ಯೂ ರದ್ದುಪಡಿಸಲು ನಗರಸಭೆಯಿಂದ ಶಾಸಕರಿಗೆ ಮನವಿ

Next Post

ಪುತ್ತೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೆಮ್ಮಾಯಿ ವತಿಯಿಂದ ರಕ್ತದಾನ ಶಿಬಿರ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

OtherNews

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!
ಪುತ್ತೂರು

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

October 23, 2025
ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!
ಪುತ್ತೂರು

ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

October 23, 2025
(ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!
Featured

(ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

October 23, 2025
ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!
ಉದ್ಘಾಟನೆ

ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!

October 23, 2025
ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!
Featured

ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!

October 23, 2025
ಉದ್ಯೋಗಾವಕಾಶ…!!
ಪುತ್ತೂರು

ಉದ್ಯೋಗಾವಕಾಶ…!!

October 23, 2025

Leave a Reply Cancel reply

Your email address will not be published. Required fields are marked *

Recent News

ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

October 24, 2025
ಸುರತ್ಕಲ್: ಇಬ್ಬರಿಗೆ ಚೂರಿ ಇರಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು…!

ಸುರತ್ಕಲ್: ಇಬ್ಬರಿಗೆ ಚೂರಿ ಇರಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು…!

October 24, 2025
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

October 23, 2025
ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

October 23, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page