Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

    ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

    ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

    ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

    ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಕಾರು ತಾಗಿದ್ದಕ್ಕೆ ಹಲ್ಲೆ: ಆಸ್ಪತ್ರೆಗೆ ದಾಖಲು..!!

    (ಮಾ.07) : ಪುತ್ತೂರಿನಲ್ಲಿ ದಿ ಮೈಂಡ್ ಬಾಡಿ ಸ್ಪೇಸ್ ಪಿಸಿಯೋಥೆರಪಿ ಕ್ಲಿನಿಕ್ ಶುಭಾರಂಭ..!!

    (ಮಾ.07) : ಪುತ್ತೂರಿನಲ್ಲಿ ದಿ ಮೈಂಡ್ ಬಾಡಿ ಸ್ಪೇಸ್ ಪಿಸಿಯೋಥೆರಪಿ ಕ್ಲಿನಿಕ್ ಶುಭಾರಂಭ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

    ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

    ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

    ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

    ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಕಾರು ತಾಗಿದ್ದಕ್ಕೆ ಹಲ್ಲೆ: ಆಸ್ಪತ್ರೆಗೆ ದಾಖಲು..!!

    (ಮಾ.07) : ಪುತ್ತೂರಿನಲ್ಲಿ ದಿ ಮೈಂಡ್ ಬಾಡಿ ಸ್ಪೇಸ್ ಪಿಸಿಯೋಥೆರಪಿ ಕ್ಲಿನಿಕ್ ಶುಭಾರಂಭ..!!

    (ಮಾ.07) : ಪುತ್ತೂರಿನಲ್ಲಿ ದಿ ಮೈಂಡ್ ಬಾಡಿ ಸ್ಪೇಸ್ ಪಿಸಿಯೋಥೆರಪಿ ಕ್ಲಿನಿಕ್ ಶುಭಾರಂಭ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ನಿಸರ್ಗ ರಮಣೀಯ ತಾಣದಲ್ಲಿ ನೆಲೆ ನಿಂತಿರುವ “ಜಗನ್ಮಾಥೆ ಶ್ರೀ ಮಹಿಷಮರ್ದಿನಿ”ಗೆ ಬ್ರಹ್ಮಕಲಶೋತ್ಸವದ ಸಂಭ್ರಮ..!! ಅಶೋಕ್ ಕುಮಾರ್ ರೈ ಮುಂದಾಳತ್ವದಲ್ಲಿ ನಡೆದು ಬಂತು ದೇಗುಲದ ಜೀರ್ಣೋದ್ಧಾರ ಕಾರ್ಯ

December 23, 2021
in ಅಂಕಣ, ಧಾರ್ಮಿಕ, ಪುತ್ತೂರು
0
ನಿಸರ್ಗ ರಮಣೀಯ ತಾಣದಲ್ಲಿ ನೆಲೆ ನಿಂತಿರುವ “ಜಗನ್ಮಾಥೆ ಶ್ರೀ ಮಹಿಷಮರ್ದಿನಿ”ಗೆ ಬ್ರಹ್ಮಕಲಶೋತ್ಸವದ ಸಂಭ್ರಮ..!! ಅಶೋಕ್ ಕುಮಾರ್ ರೈ ಮುಂದಾಳತ್ವದಲ್ಲಿ ನಡೆದು ಬಂತು ದೇಗುಲದ ಜೀರ್ಣೋದ್ಧಾರ ಕಾರ್ಯ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬ ನಿಸರ್ಗ ರಮಣೀಯ ತಾಣದಲ್ಲಿ ನೆಲೆ ನಿಂತಿರುವ ಜಗನ್ಮಾಥೆ, ಆದಿದೇವತೆ ತಾಯಿ ಮಹಿಷಮರ್ದಿನಿ ದೇವಿ ಕ್ಷೇತ್ರವೇ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ…

Advertisement
Advertisement
Advertisement

ದೇಗುಲಕ್ಕಿದೆ ಐತಿಹ್ಯ:
ದೈವಜ್ಞ, ಪ್ರಶ್ನಾ ಚಿಂತಕರು ಹಾಗೂ ಇತಿಹಾಸಕಾರರ ಪ್ರಕಾರ ಕ್ಷೇತ್ರಕ್ಕೆ ಸರಿಸುಮಾರು 800 ವರ್ಷಗಳಿಗಿಂತಲೂ ಅಧಿಕ ಇತಿಹಾಸವಿದೆ. ಈ ಪುಣ್ಯದ ಮಣ್ಣಿನಲ್ಲಿ ನೆಲೆನಿಂತಿರುವ ಶ್ರೀ ದೇವಿಯ ಆರಾಧನೆಯನ್ನು ಸ್ವರ್ಗೀಯ ಮಹಾಬಲ ಐತಾಳರ ಪೂರ್ವಿಕರು ನಡೆಸುತ್ತಿದ್ದರು. ಜತೆಗೆ ಇಲ್ಲಿ ವೇದಪಾಠಗಳನ್ನು ಹೇಳಿ ಕೊಡಲಾಗುತ್ತಿತ್ತು. ಹಾಗೆ ಮಠ ಸಂಪ್ರದಾಯದ ಹಿನ್ನೆಲೆ ಇರುವ ಕಾರಣ ಕ್ಷೇತ್ರಕ್ಕೆ ಮಠಂತಬೆಟ್ಟು ಎನ್ನುವ ಹೆಸರು ಬಂದಿದೆ ಎನ್ನುವ ಪ್ರತೀತಿಯೂ ಇದೆ.

ಹುಲ್ಲಿನ ಮಾಡಿನಿಂದ ಆಧುನಿಕತೆಯ ಸ್ಪರ್ಶ :
800 ವರ್ಷಗಳ ಹಿಂದೆ ದೇವಿಯ ಗುಡಿಯು ಹುಲ್ಲುಹಾಸಿನ ಮಾಡಿನಿಂದ ಇದ್ದು, ಬಳಿಕ ಸಮಸ್ಯೆ ಅರಿತು ಹಂಚಿನ ಮಾಡೊಂದನ್ನು ನಿರ್ಮಿಸಲಾಯಿತು. ಮಳೆ ಬಂದು ಮತ್ತೂ ಸಮಸ್ಯೆಗಳೇ ಎದುರಾದಾಗ ಇದನ್ನರಿತ ಆಗಿನ ಸಮಿತಿ ಅಧ್ಯಕ್ಷರಾಗಿದ್ದ ರಾಜೇಂದ್ರ ಆರಿಗರವರ ಮೂಲಕ ಹಲವಾರು ವ್ಯವಸ್ಥೆಗಳು ಕ್ಷೇತ್ರದಲ್ಲಿ ನಡೆದು ಬರುತ್ತವೆ. ಆರ್ಥಿಕ ಸಮಸ್ಯೆಯ ಕಾರಣಕ್ಕೆ ಭಾರೀ ಬದಲಾವಣೆ ತರಲು ಸಾಧ್ಯ ಆಗದೇ ಇದ್ದುದರಿಂದ ಹಲವಾರು ವರ್ಷಗಳ ಕಾಲ ಜೀರ್ಣೋದ್ಧಾರ ಕಾರ್ಯ ನಿಂತು, ಬಳಿಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷೀಯ ಅವಧಿ ಬಳಿಕ ಮತ್ತೆ ಇಲ್ಲಿ ಹಲವಾರು ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲಾಯಿತು. ಯಾರೂ ಊಹಿಸದ ರೀತಿಯಲ್ಲಿ ದೇಗುಲದ ಕಾರ್ಯಗಳು ನಡೆದು ಬರುತ್ತವೆ. 2007ರಲ್ಲಿ ವಿಜೃಂಭಣೆಯಿಂದ ಬ್ರಹಕಲಶೋತ್ಸವೂ ನಡೆದು ಅಂದಿನಿಂದ ಇಂದಿನವರೆಗೂ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತಿದ್ದು, ದೇವಿಯ ಕಾರಣಿಕಕ್ಕೆ ಪ್ರತ್ಯಕ್ಷ ನಿದರ್ಶನವನ್ನೂ ಕಾಣಬಹುದಾಗಿದೆ.

Advertisement
Advertisement

ಕಾರಣಿಕದ ಆಗರ ಈ ದೇಗುಲ:
ದೇಗುಲದಲ್ಲಿ ಮಾತೆ ಮಹಿಷಮರ್ದಿನಿಯ ಜತೆಗೆ ರಕ್ತೇಶ್ವರಿ, ಮಹಿಷಂದಾಯ, ಗುಳಿಗ ದೈವಗಳನ್ನೂ ಆರಾಧಿಸಿಕೊಂಡು ಬರಲಾಗುತ್ತಿದೆ. ಕ್ಷೇತ್ರ ಅಭಿವೃದ್ಧಿಯಾದಂತೆ ದೇವಿಯ ಕಾರಣಿಕ ಕೋಡಿಂಬಾಡಿಯ ಭಕ್ತರ ಮನೆ ಮನಗಳಲ್ಲಿ ಬೆಳಗಿ ನಿಂತಿದೆ. ನಂಬಿ ಬಂದ ಭಕ್ತರಿಗೆ ಇಂಬನ್ನು ಕೊಡುವ ದೇವಿಯ ತಾಣದಲ್ಲಿ ಕಂಕಣ ಭಾಗ್ಯ ಕೂಡಿ ಬರದ ಯುವತಿಯರಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನಭಾಗ್ಯ, ವಿದ್ಯೆ, ಆರೋಗ್ಯ, ಸಂಪತ್ತು ಹೀಗೆ ದೇವಿಯ ಬಳಿ ತಮ್ಮ ಮನದಿಚ್ಛೆಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದಲಿ ಕೇಳಿ ಕೊಂಡಲ್ಲಿ ದೇವಿಯು ಅನುಗ್ರಹ ತೋರುವಳು. ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿದ್ದ ಗ್ರಾಮದಲ್ಲಿ ದೇವಿಯ ಜೀರ್ಣೋದ್ಧಾರ ಕಾರ್ಯ ಆರಂಭವಾದ ದಿನದಿಂದಲೇ ಈ ಕಳಂಕವೂ ದೂರವಾಗಿದೆ. ಭಕ್ತರ ಅಭೀಷ್ಟಗಳನ್ನು ದೇವಿ ನಿತ್ಯವೂ ನೆರವೇರಿಸುತ್ತಿರುವುದೇ ಇಲ್ಲಿನ ವಿಶೇಷ. ದೇವಿಯ ಶಕ್ತಿಯಿಂದ, ದೇವಿ ಕೃಪಕಟಾಕ್ಷದಿಂದ ಮಾತು ಬಾರದ ಮಗುವೊಂದು ಮಾತನಾಡುತ್ತೆ, ಪ್ರಸವವಾಗದ ಮಹಿಳೆಗೆ ಪ್ರಸವ ಕಾರ್ಯವೂ ಆಗುತ್ತೆ, ನಡೆಯಲಾಗದ ಮಗು ಮತ್ತೆ ನಡೆದಾಡುತ್ತೆ ಅನ್ನುವ ಸತ್ಯ ಕಥೆಗಳನ್ನು ಕೇಳಿದರೆ ಇಂದಿಗೂ ಮೈ ಜುಮ್ ಎನಿಸುತ್ತದೆ.

ಕೋಡಿಂಬಾಡಿ ಅಶೋಕ್ ಕುಮಾರ್ ರೈ ಮುಂದಾಳತ್ವ : ಇದೀಗ 2021ರ ವೇಳೆಯಲ್ಲಿ ದೇಗುಲವು ವಿರಾಜಮಾನವಾಗಿ ಕಂಗೊಳಿಸುತ್ತಿದ್ದು, ಡಿಸೆಂಬರ್ 21 ರಿಂದ 27ರವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮವೂ ಮನೆ ಮಾಡಿದೆ. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಮುಂದಾಳತ್ವದಲ್ಲಿ, ಊರ ಪರವೂರ ಭಕ್ತರ ಶ್ರಮದಾನದ ಫಲವಾಗಿ ದೇಗುಲದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಬಂದು, ದೇವಿಯ ಆರಾಧನೆಯ ಮೆರುಗು ಇಮ್ಮಡಿಯಾಗಿದೆ. ಪುಟ್ಟದಾಗಿ ನಿರ್ಮಿತಗೊಂಡು ಆರಾಧಿಸಲ್ಪಡುತ್ತಿದ್ದ ಕ್ಷೇತ್ರದ ಮಹಿಮೆ ಹತ್ತೂರಿಗೂ ಪಸರಿಸಿ ಇಂದು ಹೆಮ್ಮರವಾಗಿ ಬೆಳೆದು ಅಭಿವೃದ್ಧಿಗೊಂಡಿದೆ ಅನ್ನುವುದೇ ಸಂತಸದ ವಿಚಾರ.

ತನ್ನ ಗ್ರಾಮದಲ್ಲೊಂದು ದೇಗುಲ ನಿರ್ಮಿಸಿ, ಅದರ ಅಭಿವೃದ್ಧಿಗೆ ಶ್ರಮಿಸುವುದು ಸುಲಭದ ಕಾರ್ಯವಲ್ಲ. ಹಾಗಿರುವಾಗ ಅಶೋಕ್ ಕುಮಾರ್ ರೈ ಅವರ ಶ್ರಮ ಇಂದಿನ ಸಂಭ್ರಮಕ್ಕೆ ನಾಂದಿಯಾಗಿದೆ. ಹಲವಾರು ವರುಷಗಳ ಪರಿಶ್ರಮದ ಫಲವಾಗಿ ದೇವೀತಾಣ ನಗು ಬೀರುವಂತಾಗಿದೆ.

ರಾಜಮಾರ್ಗದಂತೆ ಕಂಗೊಳಿಸುತ್ತಿದೆ ಆಲಯದ ಮಾರ್ಗ:
ದೇಗುಲವೆಂದರೆ ಭಕ್ತಿ – ಶಾಂತಿಯ ತಾಣ. ದೇಗುಲದಲ್ಲಿ ನಡೆಯುವ ಉತ್ಸವವೆಂದರೆ ಊರಿಗೇ ಸಂಭ್ರಮ ತರುವ ಬೃಹತ್ ಹಬ್ಬ. ಪ್ರತಿಯೊಬ್ಬರ ಮನೆ-ಮನದಲ್ಲೂ ಹಬ್ಬದ ವಾತಾವರಣ. ಅಂತೆಯೇ ಬ್ರಹಕಲಶೋತ್ಸವದ ತಾಣದ ದಾರಿಯುದ್ದಕ್ಕೂ ಸೌಂದರ್ಯ ಕಳೆ ಎದ್ದು ಕಾಣುವಂತಿದೆ. ಕೇಸರಿ ಪತಾಕೆಯ ಸಾಲಿನೊಡನೆ, ಕೈ ಬೀಸಿ ಕರೆವ ಮಹಾದ್ವಾರಗಳು, ಪುತ್ತೂರು ಆಸುಪಾಸಿನವರೆಗೂ ಕಾಣಸಿಗುವ ಬ್ಯಾನರ್ ಗಳು, ಸಂಪೂರ್ಣವಾಗಿ ಬೆಳಕನ್ನು ನೀಡುವ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕಣ್ಮನ ಸೆಳೆಯುತ್ತಿವೆ.

ವೈಭವದ ಬ್ರಹಕಲಶೋತ್ಸವ:
ಡಿ. 21ರಿಂದಲೂ ದಿನಕ್ಕೊಂದು ವೈವಿಧ್ಯಮಯ ಕಾರ್ಯಕ್ರಮ ನಡೆಯುತ್ತಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮ, ವೈದಿಕ ಕಾರ್ಯಕ್ರಮ ಇದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಯ ಗಾಳಿ ಬೀಸುತ್ತಿದೆ. ಇಷ್ಟೇ ಅಲ್ಲದೆ ವಿಜೃಂಭಿತ ಸಭಾ ವೇದಿಕೆ, ಪ್ರಾಚ್ಯ ವಸ್ತು ಪ್ರದರ್ಶನ ಸಿರಿ ಚಾವಡಿ, ಉಗ್ರಾಣದ ವ್ಯವಸ್ಥೆ ಒಟ್ಟಿನಲ್ಲಿ ಹಲವು ವಿಶೇಷತೆಗಳನ್ನು ಹೊತ್ತು ನಿಂತಿದೆ ದೇವಾಲಯ.

ಹಲವು ವರ್ಷಗಳ ಕನಸು-ನನಸಾದಾಗ ಬೆರೆತ ಜನಸ್ತೋಮ, ಸಾಗರದಂತೆ ಉಕ್ಕಿ ಬಂದ ಸಂಭ್ರಮದ ಮೆರುಗು, ಹೊಸತನವನ್ನು ಕಟ್ಟಿ ಕೊಟ್ಟ ನೂರಾರು ವಿಭಿನ್ನತೆಗಳು, ಒಂದಷ್ಟು ಐತಿಹ್ಯ, ಜತೆಗೆ ದೇವೀ ಪವಾಡ.. ಒಟ್ಟಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಅಚ್ಚರಿಯ ದಿನಕ್ಕೆ ದೇವಿ ತಾಣ ಸಾಕ್ಷಿಯಾಗಿದೆ.

✍️ಪ್ರಜ್ಞಾ ಓಡಿಲ್ನಾಳ..

Advertisement
Previous Post

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ‘ಪ್ರಫುಲ್’ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕಬಡ್ಡಿ ತಂಡಕ್ಕೆ ಆಯ್ಕೆ

Next Post

ಮಂಗಳೂರಿನಲ್ಲೊಂದು ಅಮಾನವೀಯ ಕೃತ್ಯ: ಮೀನುಗಾರನನ್ನು ತಲೆಕೆಳಗೆ ತೂಗು ಹಾಕಿ ಹಿಂಸೆ..!!ವಿಡಿಯೋ ವೈರಲ್: ಪ್ರಕರಣ ದಾಖಲು

OtherNews

ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!
Featured

ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

March 7, 2026
ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!
ಕ್ರೈಮ್

ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

March 7, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಕಾರು ತಾಗಿದ್ದಕ್ಕೆ ಹಲ್ಲೆ: ಆಸ್ಪತ್ರೆಗೆ ದಾಖಲು..!!

March 6, 2026
(ಮಾ.07) : ಪುತ್ತೂರಿನಲ್ಲಿ ದಿ ಮೈಂಡ್ ಬಾಡಿ ಸ್ಪೇಸ್ ಪಿಸಿಯೋಥೆರಪಿ ಕ್ಲಿನಿಕ್ ಶುಭಾರಂಭ..!!
ಉದ್ಘಾಟನೆ

(ಮಾ.07) : ಪುತ್ತೂರಿನಲ್ಲಿ ದಿ ಮೈಂಡ್ ಬಾಡಿ ಸ್ಪೇಸ್ ಪಿಸಿಯೋಥೆರಪಿ ಕ್ಲಿನಿಕ್ ಶುಭಾರಂಭ..!!

March 6, 2026
ವಿಟ್ಲ: ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ: ಹಲವರಿಗೆ ಗಾಯ..!!
Featured

ವಿಟ್ಲ: ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ: ಹಲವರಿಗೆ ಗಾಯ..!!

March 6, 2026
ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ ಹಿನ್ನಲೆ ಬೆದರಿಕೆ ಕರೆ..!!
Featured

ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ ಹಿನ್ನಲೆ ಬೆದರಿಕೆ ಕರೆ..!!

March 6, 2026

Leave a Reply Cancel reply

Your email address will not be published. Required fields are marked *

Recent News

ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

March 7, 2026
ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

March 7, 2026
ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

March 7, 2026
ಉದ್ಯಮಿ ನಟೇಶ್ ಪೂಜಾರಿಗೆ ಪಿತೃ ವಿಯೋಗ..!!

ಉದ್ಯಮಿ ನಟೇಶ್ ಪೂಜಾರಿಗೆ ಪಿತೃ ವಿಯೋಗ..!!

March 7, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page