ಪುತ್ತೂರು ಕಾಂಗ್ರೆಸ್ ನಲ್ಲಿ ಹಿರಿಯರ ಕಿರಿಯರ ನಡುವೆ ಯಾವುದೇ ಗೊಂದಲವಿಲ್ಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಂತೆ ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ವಿವಿಧ ಮುಂಚೂಣಿ ಘಟಕಗಳ ನಾಯಕರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ ರವರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ವಿಶ್ವನಾಥ್ ರೈ ರವರು ಪಕ್ಷದ ಯುವ ಕಾರ್ಯಕರ್ತರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸದಾ ಸಂಘಟನಾತ್ಮಕ ಚಟುವಟಿಕೆಗೆ ಪ್ರಥಮ ಆದ್ಯತೆ ನೀಡುತ್ತಾ ಬಂದಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ವಿಶ್ವನಾಥ್ ರೈಯವರು ಪುತ್ತೂರು ಬ್ಲಾಕ್ ನ ಉದ್ದಗಲಕ್ಕೂ ಸಂಚರಿಸಿ ಹಳ್ಳಿ ಹಳ್ಳಿಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿಕೊಂಡು ಬಂದಿದ್ದಾರೆ.
ಇತ್ತೀಚೆಗೆ ಎಐಸಿಸಿ ಮಾರ್ಗದರ್ಶನ ದಂತೆ ದೇಶದಾದ್ಯಂತ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿಯೇ ಸದಸ್ಯತ್ವ ನೋಂದಣಿಯಲ್ಲಿ ಎಂ.ಬಿ.ವಿಶ್ವನಾಥ್ ರೈ ಯವರ ನೇತೃತ್ವದಲ್ಲಿ ಪುತ್ತೂರು ಬ್ಲಾಕ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಸರಳ ಸಜ್ಜನಿಕೆಯ ಮೃದು ಸ್ವಭಾವದ ಕಾರ್ಯಕರ್ತರ ಅಚ್ಚುಮೆಚ್ಚಿನ ನಾಯಕರಾದ ಎಂ.ಬಿ.ವಿಶ್ವನಾಥ್ ರೈ ಯವರ ಸಂಘಟನಾ ಚಾತುರ್ಯವನ್ನು ಸಹಿಸದ ಬಾಹ್ಯ ಶಕ್ತಿಗಳು ಪುತ್ತೂರು ಬ್ಲಾಕ್ ಕಾಂಗ್ರೆಸ್ ದಿನೆ ದಿನೇ ಬಲಿಷ್ಠವಾಗುವುದನ್ನು ಕಂಡು ವಿಚಲಿತರಾಗಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯ ಮೂಡಿಸಲು ಯಾವುದೋ ಹೊರಗಿನ ವ್ಯಕ್ತಿಗಳು ಸಂಚು ರೂಪಿಸಿದ್ದಂತೆ ಕಾಣುತ್ತದೆ.ಅದಕ್ಕೆ ಪೂರಕವಾಗಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಹಿರಿಯರ ವಿರುದ್ಧ ಎತ್ತಿ ಕಟ್ಟುವ ಹುನ್ನಾರ ನಡೆಯುತ್ತಿದೆ. ಆದರೆ ನೈಜ ಕಾಂಗ್ರೆಸ್ ನ ಯುವ ಕಾರ್ಯಕರ್ತರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ವರಿಷ್ಠರಾದ ರಮಾನಾಥ ರೈ, ಯು.ಟಿ ಖಾದರ್, ಮಂಜುನಾಥ್ ಭಂಡಾರಿ, ಡಿ.ಸಿ.ಸಿ ಅಧ್ಯಕ್ಷರಾದ ಹರೀಶ್ ಕುಮಾರ್ ರವರು ಸೇರಿದಂತೆ ಹಲವು ನಾಯಕರು ಎಂ.ಬಿ.ವಿಶ್ವನಾಥ್ ರೈ ಯವರ ನೇತೃತ್ವದ ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ ಅದೇ ರೀತಿ ರಾಜ್ಯ ನಾಯಕರು ಕೂಡ ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಸಂಘಟನಾ ಕಾರ್ಯಗಳನ್ನು ಕಂಡು ಅತ್ಯುತ್ತಮ ಬ್ಲಾಕ್ ಎಂಬ ಉದಾಹರಣೆಯನ್ನು ಇತರೆ ಬ್ಲಾಕ್ ಗಳಿಗೆ ನೀಡುತ್ತಾರೆ ಅಷ್ಟರ ಮಟ್ಟಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ವಿಶ್ವನಾಥ್ ರೈಯವರ ಕಾರ್ಯವೈಖರಿ ಪಕ್ಷದ ಹಿರಿಯ ನಾಯಕರನ್ನು ಆಕರ್ಷಿಸಿದೆ. ಆದರೆ ಯಾವುದೋ ಹೊರಗಿನ ಶಕ್ತಿಗಳು ಕಾಂಗ್ರೆಸ್ ಪಕ್ಷದ ಒಗ್ಗಟ್ಟು, ಶಿಸ್ತು, ಸಂಘಟನಾ ಚಟುವಟಿಕೆಗಳನ್ನು ಗಮನಿಸಿ ನಿರಾಸೆಯಿಂದ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಯಾರು ಏನೇ ರಾಜಕೀಯ ಚದುರಂಗದಾಟ ಆಡಿದರು ನಾವು ಅದನ್ನು ಹಿಮ್ಮೆಟ್ಟಿ ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಎಂ.ಬಿ.ವಿಶ್ವನಾಥ್ ರೈಯವರ ಮಾರ್ಗದರ್ಶನದಲ್ಲಿ ಹಿರಿಯ, ಕಿರಿಯ ನಾಯಕರ, ಕಾರ್ಯಕರ್ತರ ಸಮ್ಮುಖದಲ್ಲಿ ನಮ್ಮ ಯುವಕ ಪಡೆಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ಪುತ್ತೂರಿನಲ್ಲಿ ಬಲಿಷ್ಠ ಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.


























