ತಿರುವನಂತಪುರಂ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕತ್ತು ಕತ್ತರಿಸಿದ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮದರಸಾಗಳನ್ನು ದೂಷಿಸಿದ್ದಾರೆ.
“ಧರ್ಮನಿಂದನೆಗೆ ಶಿರಚ್ಛೇದ ಮಾಡುವುದೇ ಸೂಕ್ತ ಶಿಕ್ಷೆ ಎಂದು ಮದರಸಾಗಳಲ್ಲಿ ಮಕ್ಕಳಿಗೆ ಕಲಿಸಿ ಕೊಡಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ತಲೆ ಕತ್ತರಿಸುವುದು ದೇವರ ಕಾನೂನು ಎಂಬಂತೆ ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ. ಈ ಬೋಧನೆಗಳನ್ನು ಪರಿಶೀಲನೆ ಮಾಡುವ ಅಗತ್ಯವಿದೆ. ನಾವು ಲಕ್ಷಣಗಳು ಕಾಣಿಸಿಕೊಂಡಾಗ ಚಿಂತೆ ಮಾಡುತ್ತೇವೆ. ಆದರೆ ಆಳವಾದ ಕಾಯಿಲೆಯನ್ನು ಗುರುತಿಸಲು ನಿರಾಕರಿಸುತ್ತೇವೆ ಎಂದು ಅವರು ಈ ಕ್ರೌರ್ಯವು ಇನ್ನೂ ಆಳವಾಗಿ ಬೇರೂರಿದೆ ಎಂದಿದ್ದಾರೆ.
ಉದಯಪುರದಲ್ಲಿ ನಡೆದ ಈ ಭೀಕರ ಕೃತ್ಯವನ್ನು ದೇಶದ ಅನೇಕ ಮುಸ್ಲಿಂ ಸಂಸ್ಥೆಗಳು ತೀವ್ರವಾಗಿ ಖಂಡಿಸಿವೆ. ಇಂತಹ ಕೃತ್ಯವನ್ನು ಇಸ್ಲಾಂ ಅನುಮೋದಿಸುವುದಿಲ್ಲ ಎಂದಿರುವ ಮುಸ್ಲಿಂ ಮುಖಂಡರು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
We worry when symptoms come but refuse to notice the deeper disease. Children are being taught in madrassas that punishment for blasphemy is beheading. It's being taught as the law of God…What's being taught there should be examined: Kerala Gov AM Khan on Udaipur beheading case pic.twitter.com/oqys2KFGyS
— ANI (@ANI) June 29, 2022




























