ಬೆಳ್ತಂಗಡಿ: ಬಳೆಂಜ ಗ್ರಾ.ಪಂ ವ್ಯಾಪ್ತಿಗೆ ಸೇರಿದ ಪೆರಾಲ್ದರಕಟ್ಟೆ ಎಂಬಲ್ಲಿ ರೇಬಿಸ್ ಕಾಯಿಲೆ ಪೀಡಿತ ನಾಯಿಯೊಂದು ಜನ ಜಾನುವಾರುಗಳಿಗೆ ಎರಗಿದ ಘಟನೆ ನಡೆದಿದೆ.
ಮಹಿಳೆಯೊಬ್ಬರು ಬೀಡಿ ತೆಗೆದುಕೊಂಡು ಹೋಗುವಾಗ ಸ್ಥಳೀಯ ಶಿರಾಜ್ ಅವರ ಹಟ್ಟಿಯಲ್ಲಿದ್ದ ಕರುವಿಗೆ ಕಚ್ಚಿದೆ. ಬಳಿಕ ಸಮೀಪದಲ್ಲೆ ಮೇಕೆ ಮರಿಯೊಂದಕ್ಕೆ ಕಡಿದ ಪರಿಣಾಮ ಮರಿ ಮೃತಪಟ್ಟಿದೆ. ಜನ ಜಾನುವಾರುಗಳನ್ನು ಗಾಯಗೊಳಿಸಿದೆ.

ಪೆರಾಲ್ದರಕಟ್ಟೆಯ ಇಂಡಸ್ಟ್ರೀಸ್ ಒಂದರ ಇಬ್ಬರು ಮಹಿಳೆಯರು ಮತ್ತು ಮಸೀದಿಯ ಬಳಿಯ ಮಹಿಳೆಯೊಬ್ಬರಿಗೆ ಹುಚ್ಚು ನಾಯಿ ಕಡಿದಿದೆ. 3 ಜಾನುವಾರುಗಳ ಮೇಲೆ ಎರಗಿ ಗಾಯಗೊಳಿಸಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

























