ಪುತ್ತೂರು: ಮೂಲದ ಯುವಕನೋರ್ವ ಅಮೇರಿಕಾದ ಐಯೋವಾದಲ್ಲಿ ರೈಲು ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ನಡೆದಿದೆ.

ಬನ್ನೂರು ಜೈನಗುರಿ ನಿವಾಸಿ, ಮೈಸೂರಿನಲ್ಲಿ ಹಿರಿಯ ಹೋಟೆಲ್ ಉದ್ಯಮಿಯಾಗಿದ್ದ ಅನಂತಕೃಷ್ಣರಾವ್ ಎಂಬವರ ಪುತ್ರ ಟಿ.ಎ ಸುಬ್ರಹ್ಮಣ್ಯ ಪಡ್ಡಿಲ್ಲಾಯ (30) ಮೃತ ಯುವಕ.
ಸುಬ್ರಹ್ಮಣ್ಯ ರವರು ಮದ್ರಾಸ್ ಐಐಟಿ ವಿದ್ಯಾರ್ಥಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಅಮೇರಿಕಾದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದರು.
ಮೃತರು ತಂದೆ ಅನಂತಕೃಷ್ಣ ರನ್ನು ಅಗಲಿದ್ದಾರೆ..



























