ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 12ನೇ ವಾರ್ಡಿನ ನೆತ್ರಕೆರೆ, ಕಡಂಬು ಅನ್ನಮೂಲೆ ಸೇರುವ ರಸ್ತೆಗೆ ನಗರೋತ್ಥಾನದ ಅಡಿಯಲ್ಲಿ ಕಾಂಕ್ರೀಟಿಕರಣಕ್ಕೆ ಹನ್ನೆರಡು ಲಕ್ಷ ರೂಪಾಯಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಒದಗಿಸಿ ಕೊಟ್ಟಿದ್ದು, ಈ ಕಾಮಗಾರಿಗೆ ಲಕ್ಷ್ಮಣ ಶೆಟ್ಟಿಗಾರ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಟ್ಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ವಾರ್ಡಿನ ಸದಸ್ಯ ಹರೀಶ್ ಸಿ ಹೆಚ್, ಮೋಹನದಾಸ್ ಉಕ್ಕುಡ, ರಾಮದಾಸ ಶೆಣೈ, ವಸಂತ ಪುಚ್ಚೆಗುತ್ತು, ವಾರ್ಡ ಅಧ್ಯಕ್ಷ ಜಗದೀಶ್ ಅನ್ನಮೂಲೆ, ವಿಗ್ನೇಶ್, ರಾಜೇಶ್ ಅನ್ನಮೂಲೆ, ರವಿಶಂಕರ್, ಮೊಯ್ದಿನ್ ಕುಂಞ, ಭಾಸ್ಕರ ಶೆಟ್ಟಿಗಾರ್, ದಿವಾಕರ ಶೆಟ್ಟಿಗಾರ್, ನಾರಾಯಣ ನಾಯ್ಕ, ಹರೀಶ್, ಪುರುಶೋತ್ತಮ್, ಹೂವಯ್ಯ, ಬಾಬು ಉಪಸ್ಥಿತರಿದ್ದರು..