ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಡಿ.17 ರಂದು ಪ್ರತಿಭಾ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ಸಂಚಾಲಕರು ಮಾತನಾಡಿ, ತಂದೆ ತಾಯಿಯರ ಇಚ್ಛೆಗೆ ಪೂರಕವಾಗಿ ಬೆಳೆದು ಸಂಸ್ಕಾರಯುತ ಜೀವನದ ಜೊತೆಗೆ ಪ್ರಭಾವಿ ವ್ಯಕ್ತಿಗಳಾಗಿ ಬೆಳೆಯಬೇಕೆಂದರು.
ಮುಖ್ಯ ಅತಿಥಿ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ಉದ್ಯಮ ಅಥವಾ ಕಮರ್ಷಿಯಲ್ ಆಗಿ ಇರುವ ಸಂದರ್ಭದಲ್ಲಿ ಈ ವಿದ್ಯಾಸಂಸ್ಥೆಯು ವಿದ್ಯೆಯನ್ನು ಸೇವೆಯ ರೀತಿಯಲ್ಲಿ ನೀಡುತ್ತಿದ್ದು ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಧನ್ಯರು ಎಂದರು.

ಕೆ ಉಮೇಶ್ ರವರು ಮಾತನಾಡಿ, ಅಂಕ ಗಳಿಕೆಯ ಜೊತೆಗೆ ಒಂದು ಸಂಪೂರ್ಣ ವಿಧ್ಯೆ ಯನ್ನು ನೀಡುತ್ತಾ ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಯು ಶ್ರಮಿಸುತ್ತಿದೆ ಎಂದರು. ಪರಮೇಶ್ವರಿ ಯವರು ಮಾತನಾಡಿ, ಈ ವಿದ್ಯಾಸಂಸ್ಥೆ ಯಲ್ಲಿ ಸಂಸ್ಕಾರಯುತ ಯುವಜನಾಂಗವನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರ , ವಿದ್ಯಾರ್ಥಿಗಳು ಅಬ್ದುಲ್ ಕಲಾಂ ನಂತೆ ಕಂಡ ಕನಸನ್ನು ನನಸಾಗಿಸಲು ನಿದ್ದೆಯಿಲ್ಲದೆ ಶ್ರಮಪಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಜಯರಾಮ ಕೆದಿಲಾಯ ರವರು ಮಾತನಾಡಿ, ಭಗವದ್ಗೀತೆಯನ್ನು ಮಕ್ಕಳು ಕಲಿಯುತ್ತಿರುವುದು ತುಂಬಾ ಸಂತೋಷದ ವಿಚಾರ ಇದೇ ರೀತಿ ಸಂಸ್ಕಾರಯುತ ವಿದ್ಯೆಯನ್ನು ಕಲಿತು ಸತ್ಪ್ರಜೆಗಳಾಗಿ ಬಾಳಿ ಎಂದು ಶುಭಾಶಯಗಳನ್ನು ಹಾರೈಸಿದರು.

ಕಲಿಕೆಯಲ್ಲಿ ಮುಂದಿರುವ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ರವರು ಎಲ್ಲರನ್ನು ಸ್ವಾಗತಿಸಿದರು. ವಾಣಿಯವರು ಧನ್ಯವಾದ ಸಲ್ಲಿಸಿದರು. ನಮಿತಾ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.

ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರ್, ಮುಖ್ಯ ಅಥಿತಿಗಳಾದ ಪರಮೇಶ್ವರಿ ,ಸಮೂಹ ಸಂಪನ್ಮೂಲ ವ್ಯಕ್ತಿ, ನರಿಮೊಗರು ಕ್ಲಸ್ಟರ್ ರಾಕೇಶ್ ರೈ ಕೆಡೆಂಜಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಅಕ್ರಮ ಸಕ್ರಮ ಸಮಿತಿ, ಸುಳ್ಯ ವಿಧಾನ ಸಭಾ ಕ್ಷೇತ್ರ. ಕೆ ಉಮೇಶ್ ಪೋಷಕರು, ನಿರ್ದೇಶಕರು ದಿ ಸಿಟಿಜನ್ ಕೋ. ಆಪರೇಟಿವ್ ಬ್ಯಾಂಕ್ ಲಿ. ಬೆಂಗಳೂರ್, ಆರ್.ಟಿ.ಡಿ ಕೆ.ಎಸ್. ಆಫೀಸರ್ ವಿಜಯಲಕ್ಷೀ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ, ಶಾಲಾ ಮುಖ್ಯ ಗುರುಗಳಾದ ಜಯಮಾಲಾ ವಿ ಎನ್., ಸದಸ್ಯರಾದ ಎಸ್.ಜಿ ಕೃಷ್ಣ ಹರೀಶ್ ಪುತ್ತೂರಾಯ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
