ಪುತ್ತೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಾಲಕನ ಚಿಕಿತ್ಸೆಗೆ ದಾನಿಗಳು ನೆರವು ಬೇಕಾಗಿದೆ.
ಡಿ.27 ರಂದು ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ 8ನೇ ತರಗತಿ ವಿದ್ಯಾರ್ಥಿ ಪುನೀತ್ಎಂಬಾತನಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ. ಬಾಲಕನ ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಲೆ ಹಾಗೂ ಕಾಲಿನ ಆಪರೇಷನ್ ಅಗತ್ಯವಿದ್ದು, ಲಕ್ಷಾಂತರ ರೂ. ಹಣದ ಅವಶ್ಯಕತೆ ಇದೆ. ಬಾಲಕ ಪುನೀತ್ ಮನೆಯವರು ಬಡಕುಟುಂಬದವರಾಗಿದ್ದು, ದಿನದ ಖರ್ಚಿಗೆ ಕಷ್ಟಪಡುವ ಮನೆಯವರಿಗೆ ಲಕ್ಷಾಂತರ ರೂ. ಹೊಂದಿಸಲು ದಿಕ್ಕೆ ತೋಚದಂತಾಗಿದೆ. ಈ ಹಿನ್ನೆಲೆ ದಾನಿಗಳು ಸಹಾಯಹಸ್ತ ಬಡಕುಟುಂಬಕ್ಕೆ ಆಸರೆಯಾಗಲಿದೆ..
Google pay/Phone Pe : 9449229225
