ಬಂಟ್ವಾಳ: ನಗರ ಪೊಲೀಸ್ ಠಾಣಾ ಅ.ಕ್ರ : 52/2004 U/s 454,457,380, 454 ಐಪಿಸಿ ( ACJ & JMFC Bantwal ಇಲ್ಲಿಯ LPC No:2/2015)ರ ಆರೋಪಿ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಜಿರೆ ಬೆಳ್ತಂಗಡಿ ಟಿ.ಬಿ ಕ್ರಾಸ್ ಹಳೇಪೆಟೆ ನಿವಾಸಿ ನರಸಿಂಹ ರವರ ಪುತ್ರ, ಪ್ರಸುತ ಕೇರಳ ಕುಂಬ್ಳೆ ನೀರ್ಜಾಲ್ ನಿವಾಸಿಯಾಗಿರುವ ಮಣಿ (ಮಣಿಕಂಠ) (41) ಬಂಧಿತ ಆರೋಪಿ.

ಆರೋಪಿಯನ್ನು ಮಾ.1 ರಂದು ವಾರೆಂಟ್ ಸಿಬ್ಬಂದಿಯಾದ ಹೆಚ್ ಸಿ ಗಣೇಶ್, ಕ್ರೈಂ ಸಿಬ್ಬಂದಿಗಳಾದ ಹೆಚ್ ಸಿ ರಾಜೇಶ್, ಪಿಸಿ ಪ್ರವೀಣ್ ರವರು ಮಾಹಿತಿ ಸಂಗ್ರಹಿಸಿ ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ಸಮೀಪದ ಶಿಬಾಜೆ ಎಂಬಲ್ಲಿಂದ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.



























