ವಿಟ್ಲ: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಚಡ್ಕ ಬೈರಿಕಟ್ಟೆ ಎಂಬಲ್ಲಿ ಗೋ ಫಾರ್ಮ್ ಎಂಬ ನೆಪದಲ್ಲಿ ಅನ್ಯಕೋಮಿನ ವ್ಯಕ್ತಿಯೋರ್ವ ಅಕ್ರಮ ಕಟ್ಟಡವೊಂದು ನಿರ್ಮಿಸಲಾಗಿದೆ ಎಂದು ಸಾರ್ವಜನಿಕ ಆರೋಪಿಸುತ್ತಿದ್ದಾರೆ.

ಸ್ಥಳೀಯರ ವ್ಯಾಪಕ ವಿರೋಧದ ನಡುವೆಯೂ ಶೇಕಡಾ 70 ರಷ್ಟು ಕೆಲಸ ಪೂರ್ತಿಗೊಂಡಿದೆ. ಇದು ಕೇರಳ ಗಡಿಗೆ ಹೊಂದಿಕೊಂಡು ಇದ್ದುದರಿಂದ ಇಲ್ಲಿನ ಪರವಾನಿಗೆಯ ಮೂಲಕ ಕೇರಳ ಕಸಾಯಿಖಾನೆಗೆ ಅಕ್ರಮ ಗೋಸಾಗಾಟ ನಡೆಸುವ ಸಾಧ್ಯತೆ ಹೆಚ್ಚಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪುಣಚ ಗ್ರಾಮ ಪಂಚಾಯತ್ ಹಾಗೂ ಪಿಡಿಒ ಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಿಡಿಒ ರವಿ ಎಂಬವರ ವಿರುದ್ಧ ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಲೋಕಯುಕ್ತರಿಗೆ ದೂರು ನೀಡಲಾಗಿದ್ದು, ಕಟ್ಟಡದ ಎಲ್ಲಾ ಕೆಲಸ ಪೂರ್ತಿಗೊಂಡ ನಂತರ ಪುಣಚ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡದ ಪರವಾನಿಗೆ ನೀಡಿದೆ.
ಕಟ್ಟಡದ ಕಂಪೌಂಡ್ ಮತ್ತು ರಸ್ತೆಗೆ ಮಧ್ಯೆ ಕೇವಲ 2ಫೀಟ್ ಜಾಗ ಬಿಟ್ಟಿದ್ದಾರೆ. ಹೈನುಗಾರಿಕೆ ಹೆಸರಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ನಿರ್ಮಿಸುತ್ತಿರುವ ಈ ಕಟ್ಟಡಡಲ್ಲಿ ಗ್ರೀನ್ ಗ್ಯಾಸ್ ಉತ್ಪಾದನೆಯಾಗುವ ಸಂಭವವು ಇದೆ.
ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ..




























