ಪುತ್ತೂರು : ಚುನಾವಣೆಯ ಹೊಸ್ತಿಲಿನಲ್ಲಿಯೇ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪ್ರಣಾಳಿಕೆ ಕೆಲವು ವಿಚಾರವು ಕಿಚ್ಚು ಹಚ್ಚಿದೆ.
ಈ ಬಗ್ಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಪ್ರತಿಕ್ರಿಯಿಸಿದ್ದು, ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳದ ನಿಷೇಧದ ಉಲ್ಲೇಖ ನನ್ನ ಗಮನಕ್ಕೆ ಬಂದಿದೆ.., ಹಿಂದೂ ಸಮಾಜದ ಮೇಲೆ ಕಾಂಗ್ರೆಸ್ ನ ಇಂತಹ ಷಡ್ಯಂತ್ರಗಳು ನಡೆಯಲು ಬಿಡುವುದಿಲ್ಲ. ಧರ್ಮ ವಿರೋಧದ ಯೋಚನೆಯನ್ನು ನಾವು ವಿರೋಧಿಸಬೇಕಾಗಿದೆ. ಇಂತಹ ಯೋಚನೆಗಳಿಂದ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದಿದ್ದಾರೆ.
ಭಜರಂಗದಳವನ್ನು ನಿಷೇಧ ಮಾಡಬೇಕು ಎಂಬ ಯೋಚನೆಯಡಿಯಲ್ಲಿ ಪ್ರಣಾಳಿಕೆ ಸೇರಿಸುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಇದನ್ನು ನಾವು ಖಂಡಿಸುತ್ತೇವೆ.
ಪ್ರಣಾಳಿಕೆಯಿಂದ ಈ ವಿಚಾರವನ್ನು ಕೈ ಬಿಡದೆ ಇದ್ರೆ ಕಾಂಗ್ರೆಸ್ ಸರ್ವನಾಶವಾಗುವುದು ಖಂಡಿತ. ನಿಷೇಧ ಮಾಡುವುದು ಬಿಡಿ.., ಒಬ್ಬ ಹಿಂದೂ ಕಾರ್ಯಕರ್ತನನ್ನು ಮುಟ್ಟುವಂತಹ ಪ್ರಯತ್ನವನ್ನು ಮಾಡಿದ್ರೇ ನಾವು ಇದಕ್ಕೆ ಉತ್ತರವನ್ನು ಕೊಡುತ್ತೇವೆ ಎಂದು ಅವರು ಗುಡುಗಿದ್ದಾರೆ..























