ಪುತ್ತೂರು : ರಸ್ತೆ ಬದಿ ದ್ವಿಚಕ್ರ ವಾಹನ ನಿಲ್ಲಿಸಿ ಸಲೂನ್ ಹೋಗಿ ಬರುವಷ್ಟರಲ್ಲಿ ಕಳುವಾದ ಘಟನೆ ಪುತ್ತೂರು ಕಲ್ಲಾರೆ ಬಳಿ ನಡೆದಿದೆ.
ನಿತಿನ್ ಎಂಬವರು ರಸ್ತೆ ಬದಿ ದ್ವಿಚಕ್ರ ವಾಹನ ನಿಲ್ಲಿಸಿ ಸಲೂನ್ ಗೆ ತೆರಳಿದ್ದರು.
ಸಲೂನ್ ನಿಂದ ಹೊರ ಬಂದು ನೋಡುವ ವೇಳೆ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ..
























