ಬಂಟ್ವಾಳ : ಗೋಳ್ತಮಜಲು ಎ ಒಕ್ಕೂಟದಲ್ಲಿ ಗೋಕುಲ ಎಂಬ ಸ್ವಸಹಾಯ ಸಂಘದ ಉದ್ಘಾಟನೆಯನ್ನು ವಲಯದ ಮೇಲ್ವಿಚಾರಕರಾದ ಸುಗುಣ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಂಘದ ಅಧ್ಯಕ್ಷರಾಗಿ ರಾಧಿಕಾ, ಕಾರ್ಯದರ್ಶಿಯಾಗಿ ಕೋಮಲಾಕ್ಷಿ, ಕೋಶಾಧಿಕಾರಿ ಮೋಹಿನಿ ಎಸ್ ಆಯ್ಕೆ ಮಾಡಲಾಯಿತು.
ವಲಯದ ಮೇಲ್ವಿಚಾರಕರು ಸುಗುಣ ಶೆಟ್ಟಿ ಸ್ವಾಗತ ಭಾಷಣ ಮಾಡಿದರು. ಗೋಳ್ತಮಜಲು ಎ ಒಕ್ಕೂಟ ಸೇವಾಪ್ರತಿನಿಧಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.


























