ಸುಬ್ರಹ್ಮಣ್ಯ : ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ, ಜಂಟಿ ಆಶಯದಲ್ಲಿ ಸುಬ್ರಹ್ಮಣ್ಯದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯನ್ನು ಹಾಗೂ ಸನ್ಮಾನ ಕಾರ್ಯಕ್ರಮವನ್ನು ನಡೆಯಿತು.

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ರವರು ಎಲ್ಲರನ್ನೂ ಬರಮಾಡಿಕೊಂಡರು. ಆರಂಭದಲ್ಲಿ ಸೀನಿಯರ್ ಚೇಂಬರ್ ನ ಅಧ್ಯಕ್ಷರು ಸೀನಿಯರ್ ವಿಶ್ವನಾಥ ನಡು ತೋಟ ಸ್ವಾಗತಿಸಿ ಕಾರ್ಗಿಲ್ 24 ವರ್ಷಗಳ ಹಿಂದೆ ನಡೆದಂತ ಕಾರ್ಗಿಲ್ ಯುದ್ಧದಲ್ಲಿ ಭಾರತದ ಯೋಧರು ತೋರಿಸಿದ ಪರಾಕ್ರಮ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಿದಂತಹ ಆ ಸಂದರ್ಭವನ್ನು ನೆನೆಸುತ್ತಾ ಇಂದು ದೇಶಾದ್ಯಂತ ಕಾರ್ಗಿಲ್ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದರು.
ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ನಿಕಟ ಪೂರ್ವ ಅಧ್ಯಕ್ಷರು ಗೋಪಾಲ ಎಣ್ಣೆ ಮಜಲ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಕಾರ್ಗಿಲ್ ನ ವಿಜಯದ ನೆನಪುಗಳನ್ನು ಮೆಲಕು ಹಾಕಿದರು.
ಸುಬ್ರಹ್ಮಣ್ಯದ ಹಿರಿಯರಾದ ರಮಾನಂದ ಪದೇ ಅವರು ದೀಪವನ್ನು ಬೆಳಗಿಸಿ ಪುಷ್ಪಾರ್ಚನೆ ನೆರವೇರಿಸಿದರು.
ಡಾ.ರವಿ ಕಕ್ಕೆಪದವು ಟ್ರಸ್ಟ್ ನ ಸದಸ್ಯರು ಹಾಗೂ ಸಭೆಯಲ್ಲಿ ಹಾಜರಿದ್ದ ಎಲ್ಲರೂ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕುಕ್ಕೆಶ್ರೀ ಜೆಸಿಐನ ಪೂರ್ವ ಅಧ್ಯಕ್ಷ ಜೆಸಿ ಮಣಿಕಂಠ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷ ರೋ ಪ್ರಶಾಂತ್ ಕೋಡಿಬೈಲು, ಶೇಷಪ್ಪ ಗೌಡ ಕುಮಾರಧಾರ, ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ವಿವೇಕ್ ದೇವರಗದ್ದೆ ,ರೋಟರಿ ಪೂರ್ವ ಅಧ್ಯಕ್ಷರು ಮಾಲಪ್ಪ ಸಂಕೇಶ, ಉಪಸ್ಥಿತರಿದ್ದರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭೂಸೇನೆಯಲ್ಲಿ ಹವಾಲ್ದಾರರಾಗಿದ್ದು, ನಿವೃತ್ತರಾದ ಕುಲುಕುಂದದ ದಿನೇಶ್ ಹಾಗೂ ಯತೀಶ್ ಪಳ್ಳಿಗದ್ದೆ ರನ್ನು ಸನ್ಮಾನಿಸಲಾಯಿತು.
ನಿವೃತ್ತ ಹವಾಲ್ದಾರಾದ ದಿನೇಶ್ ರವರು ಕಾರ್ಗಿಲ್ ಯುದ್ಧದ ಸಂದರ್ಭದಲಿ ಭಾರತದ ಸೈನಿಕರ ಪರಾಕ್ರಮವನ್ನು ಅಲ್ಲದೆ ಯುದ್ಧಭೂಮಿಯನ್ನು ವಶಪಡಿಸಿಕೊಂಡ ಬಗ್ಗೆ ಮಾತನಾಡಿ ವೀರಮರಣವನ್ನು ದೇಶಕ್ಕಾಗಿ ಅರ್ಪಿತರಾದ ಯೋಧರಿಗೆ ನಮನ ಸಲ್ಲಿಸಿದರು . ರೋ. ಪ್ರಶಾಂತ್ ಕೋಡಿಬೈಲ್ ಧನ್ಯವಾದವಿತ್ತರು.

























