ಪುತ್ತೂರು : ವಿದ್ಯಾಭಾರತಿ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟವು ಮಂಗಳೂರಿನ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14 ವರ್ಷ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

14 ವರ್ಷ ವಯೋಮಾನದ ಬಾಲಕರ ತಂಡದ ವಿವರ ಈ ಕೆಳಗಿನಂತಿದೆ:
ತಂಡದ ನಾಯಕನಾಗಿ ರಿತೇಶ್.ಕೆ (ವೆಂಕಪ್ಪ.ಕೆ ಮತ್ತು ವೀಣಾ ದಂಪತಿ ಪುತ್ರ), ಪ್ರಣಾಮ್.ಎಂ (ಎಂ.ಕೇಶವ ರಾವ್ ಮತ್ತು ಸುಭಾಷಿಣಿ ದಂಪತಿ ಪುತ್ರ), ಚಿನ್ಮಯಿ.ಸಿ.ಎಸ್ (ಶೇಷಪ್ಪ ಮೂಲ್ಯ ಮತ್ತು ಚಂದ್ರಿಕಾ ದಂಪತಿ ಪುತ್ರ), ಪ್ರೀತಮ್ (ಜಯಂತ ಗೌಡ ಮತ್ತು ಲೀಲಾವತಿ ದಂಪತಿ ಪುತ್ರ), ಮೋಶಿತ್.ಕೆ.ಜೆ (ಜಗದೀಶ ಮತ್ತು ಪ್ರೇಮ ಕುಮಾರಿ ದಂಪತಿ ಪುತ್ರ), ಯಶ್ಮಿತ್.ಎಂ.ಡಿ (ದಯಾನಂದ ಮತ್ತು ಪುಷ್ಪ ದಂಪತಿ ಪುತ್ರ) , ತೃತೇಶ್.ಬಿ (ಅಶೋಕ್.ಬಿ.ಬಿ ಮತ್ತು ಪೂರ್ಣಿಮಾ.ಬಿ ದಂಪತಿ ಪುತ್ರ) , ಅಶ್ವಿನ್ (ಜಯಂತ ಮತ್ತು ಶಾಲಿನಿ ದಂಪತಿ ಪುತ್ರ), ಸ್ನೇಹಿತ್ ಕುಮಾರ್ (ಈಶ್ವರ ಕಜೆ ಮತ್ತು ವೀಣಾ.ಎಂ.ಕೆ ದಂಪತಿ ಪುತ್ರ), ಜಿತಿನ್.ಕೆ (ಮೋಹನ ಮತ್ತು ರಂಜಿತಾ ದಂಪತಿ ಪುತ್ರ), ನಿವೇದ್ (ರಾಜೇಶ್ ಮತ್ತು ಅಶ್ವಿನಿ) ಮತ್ತು ಮನ್ವಂತ್ ಗೋಪಾಲ್ (ಗೋಪಾಲ್ ಗೌಡ ಮತ್ತು ನಮಿತಾ.ಎಂ.ಎ ದಂಪತಿ ಪುತ್ರ)