ವಿಟ್ಲ : ಕೇರಳ ಕಡೆಯಿಂದ ಕಲುಷಿತ ನೀರನ್ನು ತಂದು ವಿಟ್ಲ ಪರಿಸರದಲ್ಲಿ ಸುರಿಯುತ್ತಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಪು ನಿವಾಸಿ ರಾಘವ ರವರು ನೀಡಿದ ದೂರಿನ ಮೇರೆಗೆ ಟ್ಯಾಂಕರ್ ಲಾರಿ ಚಾಲಕ ಬನ್ನೂರು ನಿವಾಸಿ ಹಮೀದ್ (52) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆ.17 ರಂದು ಟ್ಯಾಂಕರ್ ಲಾರಿಯೊಂದು ವಿಪರೀತ ದುರ್ವಾಸನೆ ಬೀರುವ ಕಲುಷಿತ ನೀರು ಸಾರ್ವಜನಿಕ ರಸ್ತೆಗೆ ಚೆಲ್ಲಿಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ವಿಟ್ಲ ಕಾಶಿಮಠ ಎಂಬಲ್ಲಿ ಅದೇ ಟ್ಯಾಂಕರ್ ಲಾರಿಯನ್ನು ಅದರ ಚಾಲಕ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದನ್ನು ಕಂಡು ರಾಘವ ಅವರು ಆತನ ಬಳಿಗೆ ಹೋಗಿ ವಿಚಾರಿಸಿದಾಗ, ಟ್ಯಾಂಕರ್ ವಾಹನದಲ್ಲಿದ್ದ ಕಲುಷಿತ ನೀರಿನ ಸಾಗಾಟದ ಬಗ್ಗೆ ಕೇಳಿದಾಗ ಸದ್ರಿ ಟ್ಯಾಂಕರ್ ನಲ್ಲಿ ಕಲುಷಿತ ನೀರನ್ನು ಕೇರಳ ಕಡೆಯಿಂದ ತುಂಬಿಸಿಕೊಂಡು ಬಂದು ಕರ್ನಾಟಕದ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ಖಾಲಿ ಮಾಡಲು ಸಾಗಾಟ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 144/2023 ಕಲಂ: 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























