ಪುತ್ತೂರು : ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತ ಕುಂಬ್ರ ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ.ರೋಡು ಇದರ ನಿರ್ದೇಶಕರಾದ ಆರ್ ಸಿ ನಾರಾಯಣ ರೆಂಜ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಧನಂಜಯ ಕೆ, ಹಾಗೂ ನಿರ್ದೇಶಕರಾಗಿ ವಸಂತ ಪೂಜಾರಿ ಬಂಬಿಲ, ನಿತೀಶ್ ಕುಮಾರ್ ಶಾಂತಿವನ , ನಾರಾಯಣ ಪೂಜಾರಿ ಕುರಿಕ್ಕಾರ, ರಾಮಣ್ಣ ಪೂಜಾರಿ ಚಾರ್ಪಟ್ಟೆ,ಚೆನ್ನಪ್ಪ ಪೂಜಾರಿ ಕಣಿಯಾರು, ವಿಜಯ ಪೂಜಾರಿ ಆನಡ್ಕ, ತ್ರಿವೇಣಿ ಪಲ್ಲತ್ತಾರು, ಸುಷ್ಮಾ ಆಯ್ಕೆಯಾಗಿದ್ದಾರೆ.























