ಪುತ್ತೂರು : ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ INSEF Science Society of India ನಡೆಸಿರುವ INSEF – Regional Science Fair ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿವೇಕನಗರ., ತೆಂಕಿಲ ಇಲ್ಲಿನ ವಿದ್ಯಾರ್ಥಿಗಳ ತಂಡ ಆಯ್ಕೆಯಾಗಿವೆ.

8ನೇ ತರಗತಿಯ ವಿದ್ಯಾರ್ಥಿಗಳಾದ ಓಂಕಾರ್ ಮಯ್ಯ ( ಜಯಶೇಖರ ಮತ್ತು ಲೀಲಾ ದಂಪತಿ ಪುತ್ರ), ಗೌತಮ ಕೃಷ್ಣ ಕೆ (ಮಹೇಶ್ ಪ್ರಸನ್ನ ಕೆ ಮತ್ತು ಶ್ರೀಲತ ದಂಪತಿ ಪುತ್ರ), ಅತಿನ್ ಎಸ್ ಪ್ರಭು (ಸೂರ್ಯನಾರಾಯಣ ಪ್ರಭು ಮತ್ತು ಸ್ವಾತಿ ಎಸ್ ಪ್ರಭು ದಂಪತಿ ಪುತ್ರ ) ಹಾಗು ಧನ್ವಿತ್ ಎಮ್ ಕೆ ( ಕೆ ಮಾಧವ್ ಗೌಡ ಮತ್ತು ಯಶೋದ ಕೆ ದಂಪತಿ ಪುತ್ರ) ಇವರ ತಂಡ, ಎನ್ ಅಭಯ್ ( ರಂಜನ್ ಎನ್ ಮತ್ತು ರಮ್ಯ ಯು ಎಚ್ ದಂಪತಿ ಪುತ್ರ), ಆರ್ಯನ್ ಸಿ ಆರ್ ( ರಮೇಶ್ ಕುಮಾರ್ ಸಿ ಎಚ್ ಮತ್ತು ಕಾವ್ಯ ಟಿ ದಂಪತಿ ಪುತ್ರ) ಹಾಗು ದಿಶಾಂತ್ ಕೆ ( ನಾರಾಯಣ ಮೂಲ್ಯ ಕೆ., ಮಮತ ದಂಪತಿ ಪುತ್ರ) ಇವರ ತಂಡ, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಅಭಿನವ್ ಆಚಾರ್ ಕೆ ( ಪ್ರಶಾಂತ್ ಹಾಗೂ ಶ್ರುತಿ ಎಸ್ ರಾವ್ ದಂಪತಿ ಪುತ್ರ) ಮತ್ತು ಶ್ರೀಜಿತ್ ಸಿ ಎಚ್ ( ಗಣೇಶ್ ಭಟ್ ಚಿ.ಎಚ್ ಮತ್ತು ರವಿಕಲಾ ಕೆ ದಂಪತಿ ಪುತ್ರ) ಇವರ ತಂಡ, ಹರ್ಷ ಕೆ ( ಸುಂದರ ಪೂಜಾರಿ ಕೆ ಮತ್ತು ಲತಾ ಕೆ ದಂಪತಿ ಪುತ್ರ) ಮತ್ತು ಪ್ರೀತಮ್ ಎಂ ( ಬಾಸ್ಕರ್ ನಾಯ್ಕ್ ಎಂ ಮತ್ತು ಗುಲಾಬಿ ಪಿ ದಂಪತಿ ಪುತ್ರ) ಇವರ ತಂಡ ಹೀಗೆ 7 ವಿಜ್ಞಾನ ಪ್ರಾಜೆಕ್ಟ್ ಗಳು ಆಯ್ಕೆಗೊಂಡಿವೆ.
ಆಯ್ಕೆಗೊಂಡ ವಿದ್ಯಾರ್ಥಿಗಳು ನ.25 ರಂದು ಮೂಡಬಿದ್ರೆಯಲ್ಲಿ ನಡೆಯಲಿರುವ INSEF – Regional Science Fair ನಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

























