ಪುತ್ತೂರು : ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ವತಿಯಿಂದ ನಡೆಸಲ್ಪಡುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ದಿನಾಂಕ ನವೆಂಬರ್ 4, ರಿಂದ 8 ರವರೆಗೆ ಬಿಹಾರದ ಬೆಟಿಯಾದಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿ, 9 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆಯುವ ಮೂಲಕ 9 ವಿದ್ಯಾರ್ಥಿಗಳು ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿರುತ್ತಾರೆ.
17ರ ವಯೋಮಾನದ ಬಾಲಕಿಯರ ವಿಭಾಗ :
ಸಮೃದ್ಧಿ ಜೆ ಶೆಟ್ಟಿ 10ನೇ ತರಗತಿ ( ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ನ್ಯಾಯವಾದಿ ಹರಿಣಾಕ್ಷಿ ದಂಪತಿ ಪುತ್ರಿ) 100 ಮೀಟರ್ ಹರ್ಡಲ್ಸ್ ದಲ್ಲಿ ಚಿನ್ನದ ಪದಕ, ಸಾನ್ವಿ ಎಸ್ ಪಿ, 10ನೇ ತರಗತಿ (ಮುಡಿಪಿನಡ್ಕ ನಿವಾಸಿ ಭಾರತೀಯ ಸೇನೆಯಲ್ಲಿ ಯೋಧರಾಗಿರುವ ಸುಂದರ ಪೂಜಾರಿ ಮತ್ತು ಭವಿತ ದಂಪತಿ ಪುತ್ರಿ) -ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ, 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, ರಿಧಿ ಸಿ ಶೆಟ್ಟಿ, 10ನೇ ತರಗತಿ ( ಚಿದಾನಂದ ಸಿ ಮತ್ತು ಸತ್ಯವತಿ ದಂಪತಿ ಪುತ್ರಿ) – 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ.

ಡಿಂಪಲ್ ಶೆಟ್ಟಿ 9ನೇ ತರಗತಿ ( ಉದಯ ಕುಮಾರ್ ಶೆಟ್ಟಿ ಮತ್ತು ಸುನೀತಾ ದಂಪತಿ ಪುತ್ರಿ)- 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಕೃತಿ ಕೆ 9ನೇ ತರಗತಿ ( ಕೊರಗಪ್ಪ ಗೌಡ ಮತ್ತು ವನಿತಾ ದಂಪತಿ ಪುತ್ರಿ) – 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 3000 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಅಮೃತಾ ಬಿ.ಎ 9ನೇ ತರಗತಿ ( ಅಮರನಾಥ ಮತ್ತು ಲತಾ ಕುಮಾರಿ ದಂಪತಿ ಪುತ್ರಿ) – 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ,
3000 ಮೀಟರ್ ಓಟದಲ್ಲಿ ಕಂಚಿನ ಪದಕ, ಎಂ ಪವಿತ್ರ 10ನೇ ತರಗತಿ ( ಕೇಶವದಾಸ್ ಮತ್ತು ಸುಹಾಸಿನಿ ದಂಪತಿ ಪುತ್ರಿ) ಹ್ಯಾಮರ್ ತ್ರೋ ದಲ್ಲಿ ಬೆಳ್ಳಿ ಪದಕವನ್ನು ಪಡೆಯುವುದರೊಂದಿಗೆ ಒಟ್ಟು 40ಅಂಕಗಳೊಂದಿಗೆ 17ರ ವಯೋಮಾನದ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
17ರ ವಯೋಮಾನದ ಬಾಲಕರ ವಿಭಾಗ:
ಸಾತ್ವಿಕ್ ಆರ್ 10ನೇ ತರಗತಿ (ಆರ್.ಸಿ.ನಾರಾಯಣ ರೆಂಜ ಮತ್ತು ಸುಮ ದಂಪತಿ ಪುತ್ರ) 110 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ, ಸಚಿತ್ ಪಿಕೆ 10ನೇ ತರಗತಿ ( ಪ್ರಕಾಶ್ ಮತ್ತು ಸುನೀತಾ ದಂಪತಿ ಪುತ್ರ) 4×400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
17ರ ವಯೋಮಾನದ ಬಾಲಕಿಯರು 4×400 ಮೀಟರ್ ರಿಲೇ ಓಟದಲ್ಲಿ ಒಂದೇ ಸಂಸ್ಥೆಯ 4 ವಿದ್ಯಾರ್ಥಿನಿಯರು ಭಾಗವಹಿಸಿ, ಈ ಹಿಂದಿನ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿರುತ್ತಾರೆ.
ಇದಲ್ಲದೆ 14ರ ವಯೋಮಾನದ ಬಾಲಕರ ವಿಭಾಗದಲ್ಲಿ 400ಮೀ ಓಟದಲ್ಲಿ ಚೇತಸ್.ಪಿ.ವೈ, 8ನೇ ತರಗತಿ ( ಯೋಗೀಶ್.ಪಿ ಮತ್ತು ಕೇಸರಿ ದಂಪತಿ ಪುತ್ರ) ಹಾಗೂ 17ರ ವಯೋಮಾನದ ಬಾಲಕರ ವಿಭಾಗದ ಗುಂಡು ಎಸೆತ ದಲ್ಲಿ ಮಿಲನ್.ಎನ್.ಬಿ, 10ನೇ ತರಗತಿ ( ನವೀನ್ ಬಂಗೇರ ಮತ್ತು ವತ್ಸಲಾ ದಂಪತಿ ಪುತ್ರ) ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

























