ಉಡುಪಿ : ನಾವು ಸ್ವಲ್ಪ ಬೇಜವಾಬ್ದಾರಿ ತೊರಿದ್ರು ಅದು ದೊಡ್ಡ ಅನಾಹುತಕ್ಕೆ ಕಾರಣ ಆಗುತ್ತೆ. ಇದಕ್ಕೆ ಈ ಸ್ಟೋರಿಯೇ ಸಾಕ್ಷಿ. ಟಿಪ್ಪರ್ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಕಾರ್ಮಿಕನೊಬ್ಬನ ಪ್ರಾಣವೇ ಹೋಗಿದೆ.

ಇಬ್ಬರು ತಮ್ಮ ಪಾಡಿಗೆ ತಾವು ಪೆಟ್ರೋಲ್ ಬಂಕ್ ಆವರಣದಲ್ಲಿ ಮಲಗಿದ್ರು. ಈ ವೇಳೆ ಅವರ ಮೇಲೆ ಟಿಪ್ಪರ್ ಒಂದು ಹತ್ತಿಬಿಟ್ಟಿದೆ.
ಉಡುಪಿಯ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಬಂಕ್ ಆವರಣದಲ್ಲಿ ಈ ಘಟನೆ ನಡೆದಿದೆ.
ಪೆಟ್ರೋಲ್ ಬಂಕ್ನಲ್ಲಿ ಕಾರ್ಮಿಕರು ಮಲಗಿದ್ದು, ಇದೇ ವೇಳೆ ಚಾಲಕನೊಬ್ಬ ಲಾರಿಯನ್ನ ಅಲ್ಲೆ ಟರ್ನ್ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಅಲ್ಲೇ ಮಲಗಿದ್ದ ಕಾರ್ಮಿಕರ ಮೇಲೆಯೇ ಲಾರಿ ಹರಿದುಬಿಟ್ಟಿದೆ. ಇದ್ರಿಂದ ಶಿವರಾಜ್ ಎನ್ನುವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


























