ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಜೂಜಾಟವಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಎಂಬಲ್ಲಿ ನಡೆದಿದೆ.
ಮೊಹಮ್ಮದ್ ರಿಯಾಜ್, ಅಬ್ದುಲ್ಲಾ, ಅಬ್ದುಲ್ ಅಝೀಜ್ ಬಂಧಿತರು.
ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ರೈಲ್ವೇ ಟ್ರಾಕ್ ನ ಬಳಿ ಹಣವನ್ನು ಪಣವಾಗಿಟ್ಟು ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಎಲೆಗಳಲ್ಲಿ ಉಲಾಯಿ ಪಿದಾಯಿ ಎಂಬ ಜೂಜಾಟವಾಡುತ್ತಿದ್ದ ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕಲೈಮಾರ್ ಪಿ ರವರು ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದಿರುತ್ತಾರೆ.
ಸ್ಥಳದಲ್ಲಿ ಜೂಜಾಟದ ನಗದು ಹಣ ಒಟ್ಟು 3,790 ರೂಪಾಯಿ, ಇಸ್ಪಿಟ್ ಎಲೆಗಳು ಹಾಗೂ ಫ್ಲಾಸ್ಟಿಕ್ ಚೀಲವನ್ನು ಸ್ವಾದೀನಪಡಿಸಿಕೊಂಡು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ:17/2024 ಕಲಂ : 87 KP ಆಕ್ಟ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























