ಸವಣೂರು : ನಾಪತ್ತೆಯಾಗಿದ್ದ ಬಾಲಕ ಅರೆಲ್ತಡಿ ಬಳಿ ಪತ್ತೆಯಾದ ಬಗ್ಗೆ ವರದಿಯಾಗಿದೆ.
ಅರೆಲ್ತಡಿ ನಿವಾಸಿ ಅಶೋಕ ಹಾಗೂ ವನಿತಾ ದಂಪತಿ ಪುತ್ರ, ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಅಶ್ವಥ್ (13) ನಾಪತ್ತೆಯಾಗಿದ್ದ ಬಾಲಕ.

ಅಶ್ವಥ್ ಅರೆಲ್ತಡಿ ಸಮೀಪದ ಹೊಸ ಮನೆಯೊಂದರಲ್ಲಿ ಪತ್ತೆಯಾಗಿದ್ದಾನೆ. ಪರೀಕ್ಷೆ ಇದ್ದ ಕಾರಣ ಶಾಲೆಗೆ ತೆರಳದೆ ಹೊಸ ಮನೆ ಸಮೀಪ ಕುಳಿತಿದ್ದ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿ ಅಲೇಶ್ ಹಾಗೂ ಸ್ಥಳೀಯರ ಸಹಕಾರದಿಂದ ಬಾಲಕನನ್ನು ಪತ್ತೆ ಮಾಡಲಾಗಿದೆ.