Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

    ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

    ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

    ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

    ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

    ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

    ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!

    ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ‌ ನೀಡಿದ ಶಾಸಕ ಅಶೋಕ್ ರೈ..!!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ‌ ನೀಡಿದ ಶಾಸಕ ಅಶೋಕ್ ರೈ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

    ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

    ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

    ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

    ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

    ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

    ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!

    ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ‌ ನೀಡಿದ ಶಾಸಕ ಅಶೋಕ್ ರೈ..!!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ‌ ನೀಡಿದ ಶಾಸಕ ಅಶೋಕ್ ರೈ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಮೇಲಿನ ಮುಕ್ಕೂರು : ಸ್ಥಳ ಸಾನಿಧ್ಯ ಅಭಿವೃದ್ಧಿ ಕುರಿತಂತೆ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ

February 29, 2024
in ಧಾರ್ಮಿಕ, ಪುತ್ತೂರು, ಸುಳ್ಯ
0
ಮೇಲಿನ ಮುಕ್ಕೂರು : ಸ್ಥಳ ಸಾನಿಧ್ಯ ಅಭಿವೃದ್ಧಿ ಕುರಿತಂತೆ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮುಕ್ಕೂರು : ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ದಕ್ಷಿಣ ಮೂರ್ತಿ(ಶಿವ) ಸಾನಿಧ್ಯಕ್ಕೆ ಪ್ರಧಾನ ಸ್ಥಾನ ಇರುವುದು ಗೋಚರಿಸಿದ್ದು, ಈಗ ಪ್ರಧಾನವಾಗಿ ಪೂಜಿಸಲ್ಪಡುವ ವಿಷ್ಣುಮೂರ್ತಿ ದೇವರಿಗೆ ಸರಿ ಸಮಾನ ರೀತಿಯಲ್ಲಿ ದಕ್ಷಿಣ ಮೂರ್ತಿಗೂ ಸ್ಥಾನ ಕಲ್ಪಿಸಬೇಕು ಎನ್ನುವ ಅಂಶವು ಮೇಲಿನ ಮುಕ್ಕೂರಿನಲ್ಲಿ ನಡೆಯುತ್ತಿರುವ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

Advertisement
Advertisement
Advertisement

Advertisement

Advertisement
Advertisement

ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಸ್ಥಳ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ದೈವಜ್ಞ ಗಣೇಶ್ ಭಟ್ ಮುಳಿಯ ನೇತೃತ್ವದಲ್ಲಿ ನಡೆದ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಿತು.

ಪೆರುವೋಡಿ ಶ್ರೀ ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲಿ ಮೇಲಿನ ಮುಕ್ಕೂರಿನಿಂದ ಅರಸು ದೈವಗಳಾದ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ದೈವಗಳ ಭಂಡಾರ ತೆಗೆದುಕೊಂಡು ಹೋಗಿ ನೇಮ ನಡೆಯಬೇಕು ಎನ್ನುವ ಅಂಶ ಎರಡನೆ ದಿನದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದ್ದು ಆ ಬಗ್ಗೆ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ವಿಮರ್ಶಿಸುವ ಸಂದರ್ಭದಲ್ಲಿ ಈ ಅಂಶ ಗೋಚರಕ್ಕೆ ಬಂದಿದೆ.

ಪ್ರಧಾನ ಸ್ಥಾನ

ಪೆರುವೋಡಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಅನಾದಿ ಕಾಲದಲ್ಲಿ ದಕ್ಷಿಣ ಮೂರ್ತಿ(ಶಿವ) ಪ್ರಧಾನ ಸ್ಥಾನದಲ್ಲಿ ಇತ್ತು ಅನ್ನುವ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು‌ ಬರುತ್ತಿದೆ. ಈಗ ವಿಷ್ಣುಮೂರ್ತಿ ದೇವರು ಪ್ರಧಾನ ಸ್ಥಾನದಲ್ಲಿದ್ದು ದಕ್ಷಿಣ ಮೂರ್ತಿಯನ್ನು ಸುತ್ತುಪೌಳಿಯ ದಿಕ್ಕಿನಲ್ಲಿ ಪೂಜಿಸಲಾಗುತ್ತಿದೆ. ದಕ್ಷಿಣ ಮೂರ್ತಿಗೆ ಸಿಗಬೇಕಿದ್ದ ಪ್ರಾಧ್ಯಾನತೆ ಸಿಗುತ್ತಿಲ್ಲ. ಪ್ರಸ್ತುತ ವಿಷ್ಣುಮೂರ್ತಿ ದೇವರು ಪ್ರಧಾನ ಸ್ಥಾನದಲ್ಲಿ ಆರಾಧನೆಗೊಳ್ಳುತಿದ್ದು ಅದಕ್ಕೆ ಸರಿ ಸಮಾನವಾದ ರೀತಿಯಲ್ಲಿ ಅದರ ಪಕ್ಕದಲ್ಲೇ ಗರ್ಭಗುಡಿಯನ್ನು ನಿರ್ಮಿಸಿ ದಕ್ಷಿಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡಕ್ಕೂ ಸಮಾನ ಸ್ಥಾನ ಕಲ್ಪಿಸುವುದು ಸೂಕ್ತ ಎನ್ನುವ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ.

ಪ್ರಶ್ನಾಚಿಂತನೆ ಬಗ್ಗೆ ಮುಂದೆ ತೀರ್ಮಾನ

ಪೆರುವೋಡಿ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ನಡೆಸಿ ಹೆಚ್ಚಿನ‌ ವಿಮರ್ಶೆ ನಡೆಸುವ ಬಗ್ಗೆ ಊರ ಪ್ರಮುಖರು, ಭಕ್ತರ ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾವಿಷ್ಣುವಿನ ಇಚ್ಛೆಯಂತೆ ಮೇಲಿನ ಮುಕ್ಕೂರಿನಲ್ಲಿ ಪ್ರಶ್ನಾಚಿಂತನೆ ನಡೆಯುತ್ತಿದೆ. ಮೇಲಿನ ಮುಕ್ಕೂರು ಕ್ಷೇತ್ರ ಜೀರ್ಣೋದ್ಧಾರಗೊಂಡು ಉತ್ಸವಗಳು ಆರಂಭಗೊಂಡ ಬಳಿಕ ಈ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಸರ್ವ ಸಾನಿಧ್ಯಗಳ ಪುನರುತ್ಥಾನದ ಕಾರ್ಯಗಳು ತಾನಾಗಿಯೇ ಆಗುತ್ತದೆ. ಇನ್ನೂ ಪೆರುವೋಡಿ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸುವುದು ಕ್ಷೇತ್ರದ ಆಡಳಿತ ಸಮಿತಿ, ಭಕ್ತ ವೃಂದಕ್ಕೆ‌ ಬಿಟ್ಟ ವಿಚಾರ ಎಂದು ದೈವಜ್ಞರು ಅಭಿಪ್ರಾಯಿಸಿದರು. ಮೇಲಿನ ಮುಕ್ಕೂರಿನ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರಥಮ ಆದ್ಯತೆ ನೀಡೋಣ. ಪ್ರಶ್ನಾ ಚಿಂತನೆ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಹಾಗೂ ಭಕ್ತವೃಂದ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ದೇವಾಲಯದ ಆಡಳಿತ ಸಮಿತಿ ಸದಸ್ಯರು ಅಭಿಪ್ರಾಯಿಸಿದರು.

ಐದು ಕಡೆಗಳಲ್ಲಿ ಉತ್ಸವ

ಮೇಲಿನ ಮುಕ್ಕೂರಿನ ಸಾನಿಧ್ಯಕ್ಕೆ ಸಂಬಂಧಿಸಿ ಐದು ಕಡೆಗಳಲ್ಲಿ ಬೇರೆ-ಬೇರೆ ಉತ್ಸವಗಳು ನಡೆಯುತಿತ್ತು. ಅಪಾರ ಭೂ ಸಂಪತ್ತು ಹೊಂದಿದ್ದ ಕ್ಷೇತ್ರ ಇದಾಗಿದ್ದು ಬೇರೆ-ಬೇರೆ ಕುಟುಂಬಗಳ ಒಡೆತನದಲ್ಲಿರುವ ಸ್ಥಳಗಳಲ್ಲಿಯು ಬೇರೇ ಬೇರೇ ಸಾನಿಧ್ಯಗಳಿದ್ದು ಮೇಲಿನ ಮುಕ್ಕೂರಿನಲ್ಲಿ ಸ್ಥಳ ಸಾನಿಧ್ಯ ಜೀರ್ಣೋದ್ಧಾರಗೊಂಡು ಆರಾಧನೆ ಆರಂಭಗೊಂಡ ಬಳಿಕ ಈ ಎಲ್ಲ ಸಾನಿಧ್ಯಗಳು ಬೆಳಗಲಿದೆ ಎಂಬ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ.

ಹಸುರು ಹೊರೆಕಾಣಿಕೆ ಸಮರ್ಪಿಸಿ

ಮೇಲಿನ ಮುಕ್ಕೂರು ತರವಾಡು ಕ್ಷೇತ್ರವು ಅಪಾರ ಭೂ ಸಂಪತ್ತು ಹೊಂದಿತ್ತು. ಭೂ ಮಸೂದೆ ಕಾಲದಲ್ಲಿ ಹಲವರು ಅರ್ಜಿ ಸಲ್ಲಿಸಿದ ಪರಿಣಾಮ ಸಾಕಷ್ಟು ಜಾಗ ಬೇರೆ ಬೇರೆ ವ್ಯಕ್ತಿಗಳ ಪಾಲಾಗಿದೆ. ಹಾಗಾಗಿ ಕ್ಷೇತ್ರದ ವ್ಯಾಪ್ತಿಯ ಜಮೀನಿನ‌ ಒಡೆತನ ಹೊಂದಿರುವ ಕುಟುಂಬಗಳು ಮೇಲಿನ ಮುಕ್ಕೂರಿನ ದೈವ-ದೇವಿ ಶಕ್ತಿಗಳನ್ನು ಆರಾಧಿಸಬೇಕು. ನವರಾತ್ರಿ ಸೇರಿದಂತೆ ವಿವಿಧ ಪರ್ವ ದಿನಗಳಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸ್ಥಳಗಳಲ್ಲಿ ವಾಸವಾಗಿರುವ ಮನೆಗಳಿಂದ ಕ್ಷೇತ್ರಕ್ಕೆ ಈಗ ಸಲ್ಲಿಕೆಯಾಗುತ್ತಿರುವ ಹಸುರು ಹೊರೆಕಾಣಿಕೆ ಏನೇನೂ ಸಾಲದು. ಅದರ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಬೇಕು ಎಂಬ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು‌ ಬಂತು.

ಈ ಸಂದರ್ಭದಲ್ಲಿ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಪ್ರಮುಖರಾದ ಎಂ.ಕೆ.ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಉಮೇಶ್ ರಾವ್ ಕೊಂಡೆಪ್ಪಾಡಿ, ಶ್ರೀಧರ ಬೈಪಡಿತ್ತಾಯ, ಮೋಹನ ಬೈಪಡಿತ್ತಾಯ, ವಸಂತ ಬೈಪಡಿತ್ತಾಯ, ಲಕ್ಷ್ಮೀಶ ಬೈಪಡಿತ್ತಾಯ, ಸುಧೀರ್ ಕೊಂಡೆಪ್ಪಾಡಿ, ಸುಬ್ರಾಯ ಭಟ್ ನೀರ್ಕಜೆ, ನರಸಿಂಹ ತೇಜಸ್ವಿ, ಗೋಪಾಲಕೃಷ್ಣ ಭಟ್ ಮನವಳಿಕೆ ಸಹಿತ ಊರ ಪ್ರಮುಖರು ಉಪಸ್ಥಿತರಿದ್ದರು.

Advertisement
Advertisement
Previous Post

ಪಾಕಿಸ್ತಾನ ಪರ ಘೋಷಣೆ ಆರೋಪ : ಪುತ್ತೂರಿನಲ್ಲಿ ಬಿಜೆಪಿಯಿಂದ ನಾಸೀರ್ ಹುಸೇನ್ ಪ್ರತಿಕೃತಿ ದಹಿಸಿ ಆಕ್ರೋಶ

Next Post

(ಫೆ.29) ಪುತ್ತಿಲ ಪರಿವಾರದ ಮಹತ್ವದ ಪತ್ರಿಕಾಗೋಷ್ಠಿ..!!! ಲೋಕಸಭಾ ಚುನಾವಣೆ ಬಗ್ಗೆ ಮಹತ್ವದ ನಿರ್ಧಾರ ಸಾಧ್ಯತೆ..!!!

OtherNews

ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!
ಪುತ್ತೂರು

ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

October 21, 2025
ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!
Featured

ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

October 21, 2025
ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!
Featured

ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

October 21, 2025
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!
Featured

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

October 21, 2025
ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!
ಪುತ್ತೂರು

ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!

October 21, 2025
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ‌ ನೀಡಿದ ಶಾಸಕ ಅಶೋಕ್ ರೈ..!!
Featured

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ‌ ನೀಡಿದ ಶಾಸಕ ಅಶೋಕ್ ರೈ..!!

October 21, 2025

Leave a Reply Cancel reply

Your email address will not be published. Required fields are marked *

Recent News

ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

October 21, 2025
ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

October 21, 2025
ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

October 21, 2025
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

October 21, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page