ಚಿತ್ರದುರ್ಗ : ಪತಿಯ ಐಪಿಎಲ್ ಬೆಟ್ಟಿಂಗ್ನಿಂದ 1.5 ಕೋಟಿ ರೂಪಾಯಿ ಸಾಲಕ್ಕೆ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಸಂಬಂಧ ಪಟ್ಟಂತೆ 3 ಜನ ಆರೋಪಿಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೊಳಲ್ಕೆರೆ ಪೊಲೀಸರು 13 ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಗಿರೀಶ್, ಶಿವು, ವೆಂಕಟೇಶ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಪತಿ ದರ್ಶನ್ ಬಾಬು ಐಪಿಎಲ್ ಬೆಟ್ಟಿಂಗ್ ನಲ್ಲಿ ಸುಮಾರು 1.5 ಕೋಟಿ ಸಾಲ ಮಾಡಿದ್ದರು. 1 ಕೋಟಿಗೂ ಹೆಚ್ಚು ಹಣ ಮರುಪಾವತಿ ಮಾಡಿದ್ದರು. ಇನ್ನೂ ಸುಮಾರು 54 ಲಕ್ಷ ಸಾಲ ಉಳಿಸಿಕೊಂಡಿದ್ದರು. ಆರೋಪಿಗಳು ಹಣ ಕೊಡದಿದ್ರೆ ಮಾನ ಹರಾಜು ಹಾಕುವ ಬೆದರಿಕೆ ಒಡ್ಡಿದ್ದರು.
ಇತ್ತ ಆರೋಪಿಗಳು ಶ್ರೀಮಂತಿಕೆಯ ಆಸೆ ತೋರಿಸಿ ಬೆಟ್ಟಿಂಗ್ ದಂಧೆಗೆ ದರ್ಶನ್ ರನ್ನು ಪರಿಚಯಿಸಿದ್ದರು. ಮೃತ ರಂಜಿತಾ ತಂದೆ ವೆಂಕಟೇಶ್ ಈ ಕುರಿತು ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಸದ್ಯ ಮೂವರನ್ನು ಹೊಳಲ್ಕೆರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನುಳಿದವರಿಗಾಗಿ ಹುಡುಕಾಡುತ್ತಿದ್ದಾರೆ.




























