ಪುತ್ತೂರು : ಎ.10ರಿಂದ 10 ದಿನಗಳ ಕಾಲ ನಡೆದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಎ.19ರಂದು ಧ್ವಜಾವರೋಹಣದೊಂದಿಗೆ
ಸಂಪನ್ನಗೊಂಡಿತು.


ಎ.10 ರಂದು ಶ್ರೀ ದೇವರ ಧ್ವಜರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿದ್ದು, ಎ.17ರಂದು ಬ್ರಹ್ಮರಥೋತ್ಸವ ನಡೆಯಿತು.

ಎ.18ರಂದು ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ಶ್ರೀ ದೇವರು ದಾರಿಯುದ್ದಕ್ಕೂ 50 ಕಟ್ಟೆ ಪೂಜೆ ಮತ್ತು ಅಂಗಡಿ ಮನೆಗಳಿಂದ ಆರತಿ ಸ್ವೀಕರಿಸುತ್ತಾ ಕಾಲ್ನಡಿಗೆಯಲ್ಲಿ ತೆರಳಿ ಎ.19ರಂದು ಬೆಳಿಗ್ಗೆ ವೀರಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತಲುಪಿ ಅಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನಕ್ಕೆ ಇಳಿದರು. ಅಲ್ಲಿ ಸ್ನಾನ ಮುಗಿಸಿ ಹೊರಡಿ ನದಿ ತಟದಲ್ಲಿರುವ ಕಟ್ಟೆಯಲ್ಲಿ ನೈವೇದ್ಯ, ಮಹಾಪೂಜೆ ಸ್ವೀಕರಿಸಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿದರು.

ಬಳಿಕ ಧ್ವಜಾವರೋಹಣ ಕಾರ್ಯಕ್ರಮ ನಡೆಯಿತು. ಆ ಮೂಲಕ ಪುತ್ತೂರು ಜಾತ್ರೆ ಸಂಪನ್ನಗೊಂಡಿತು.

ಫೋಟೋ : ನಿಶಾಂತ್ ಬನ್ನೂರು