ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಮನೆಗೆ ತೆರಳಿದ್ದ ಪೊಲೀಸ್ ಅಧಿಕಾರಿಯೋರ್ವರನ್ನು ಶಾಸಕರು ಮನೆಯಿಂದ ಹೊರ ಹೋಗುವಂತೆ ತಿಳಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಹರೀಶ್ ಪೂಂಜ ಅವರ ಹೇಳಿಕೆಯೊಂದನ್ನು ಪೊಲೀಸ್ ಅಧಿಕಾರಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ್ದರೆನ್ನಲಾಗಿದೆ.
![](https://zoomintv.online/wp-content/uploads/2024/05/IMG-20240522-WA0036-1024x682.jpg)
ಇಂದು ಶಾಸಕರ ಮನೆಗೆ ಪೊಲೀಸ್ ಅಧಿಕಾರಿ ಆನಂದ್ ಅವರು ಆಗಮಿಸಿದ್ದು, ಈ ವೇಳೆ ಅಸಮಾಧಾನಗೊಂಡ ಶಾಸಕರು ಅವರನ್ನು ಹೊರಗೆ ಕಳುಹಿಸಿ ಜನ ಇದ್ದಾರೆ ಗಲಾಟೆ ಮಾಡುತ್ತಾರೆ ಎಂದು ಹೇಳಿದರು.
ಬಳಿಕ ಸೆಕ್ಯೂರಿಟಿ ನೀಡಿ ಪೊಲೀಸ್ ಅಧಿಕಾರಿ ಆನಂದ್ ಅವರನ್ನು ಶಾಸಕರ ಮನೆಯಿಂದ ಕರೆದುಕೊಂಡು ಹೋಗಲಾಯಿತು.