Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಯುವತಿಗೆ ವಂಚನೆ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಯುವತಿಗೆ ವಂಚನೆ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಮುಕ್ಕೂರು : ಎಎಸ್ ಐ ದಿ.ಸುಂದರ ಕಾನಾವುಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ : ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರ ನಿರ್ಗಮಿಸಿದ್ದು ದುಃಖಕರ ಸಂಗತಿ – ಡಾ. ನರಸಿಂಹ ಶರ್ಮಾ ಕಾನಾವು

August 3, 2024
in ಪುತ್ತೂರು, ಸುಳ್ಯ
0
ಮುಕ್ಕೂರು : ಎಎಸ್ ಐ ದಿ.ಸುಂದರ ಕಾನಾವುಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ : ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರ ನಿರ್ಗಮಿಸಿದ್ದು ದುಃಖಕರ ಸಂಗತಿ – ಡಾ. ನರಸಿಂಹ ಶರ್ಮಾ ಕಾನಾವು
Share on WhatsAppShare on FacebookShare on Twitter
Advertisement
Advertisement
Advertisement

ಮುಕ್ಕೂರು : ಕಡು ಬಡತನದ ನಡುವೆ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಸುಂದರ ಕಾನಾವು ತನ್ನ ಪರಿಶ್ರಮದಿಂದಲೇ ಪೊಲೀಸ್ ಇಲಾಖೆಗೆ ಸೇರಿ ವೃತ್ತಿ ನಿಷ್ಠೆಯಿಂದ ಎಎಸ್‍ಐ ಹಂತಕ್ಕೆ ತಲುಪಿದ್ದರು. ಅವರು ವೃತ್ತಿ, ವೈಯಕ್ತಿಕ ಬದುಕಿನಲ್ಲಿ ಇನ್ನಷ್ಟು ಉನ್ನತ್ತಿ ಕಾಣುವ ಹೊತ್ತಲ್ಲಿ ಅಕಾಲಿಕವಾಗಿ ನಮ್ಮನ್ನಗಳಿರುವುದು ದುಃಖಕರ ಸಂಗತಿ ಎಂದು ಕಾನಾವು ಕ್ಲಿನಿಕ್ ವೈದ್ಯ, ಪುತ್ತೂರು ಐಎಂಎ ಘಟಕದ ಅಧ್ಯಕ್ಷ ಡಾ.ನರಸಿಂಹ ಶರ್ಮಾ ಕಾನಾವು ಹೇಳಿದರು.

Advertisement
Advertisement
Advertisement
Advertisement
Advertisement
Advertisement

Advertisement
Advertisement

ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮುಕ್ಕೂರು ನ್ಯಾಯಬೆಲೆ ಅಂಗಡಿಯ ಸಭಾಂಗಣದಲ್ಲಿ ನಡೆದ ಪುತ್ತೂರು ನಗರ ಠಾಣಾ ಎಎಸ್‍ಐ ಆಗಿದ್ದ ದಿ.ಸುಂದರ ಕಾನಾವು ಅವರ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

ಕಷ್ಟಗಳು ದೂರವಾಗಿ ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರು ಅಗಲಿ ಹೋದರು. ಸಣ್ಣ ವಯಸ್ಸಿನಲ್ಲಿ ಅವರ ಹಠಾತ್ ನಿರ್ಗಮನ ಇಡೀ ಕುಟುಂಬಕ್ಕೆ, ಊರಿಗೆ ಆಘಾತವನ್ನು ಉಂಟು ಮಾಡಿದೆ. ಆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡುವ ಜತೆಗೆ ಸುಂದರ ಅವರ ನೆನಪು ಶಾಶ್ವತವಾಗಿರಲಿ ಎಂದರು.

ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸುಂದರ ಕಾನಾವು ಅವರು ಕೂಲಿ ಕೆಲಸ ಮಾಡುತ್ತಿದ್ದ ಹೊತ್ತಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ದಿ. ಕಾನಾವು ಗೋಪಾಲಕೃಷ್ಣ ಭಟ್ ಅವರು ಇದಕ್ಕೆ ಪ್ರೋತ್ಸಾಹ ನೀಡಿದ್ದರು. ಸತತ ಪ್ರಯತ್ನದ ಫಲವಾಗಿ ಅವರಿಗೆ ಸರಕಾರಿ ಕೆಲಸ ಸಿಕ್ಕಿತ್ತು. ಆದರೆ ಬದುಕಿನ ಸುಖ ಅನುಭವಿಸುವ ಹೊತ್ತಿಗೆ ಅವರ ನಿರ್ಗಮನ ಎಲ್ಲರನ್ನೂ ಶೂನ್ಯವನ್ನಾಗಿಸಿದೆ ಎಂದರು.

ಕಾನಾವು ಕುವೆತ್ತಡ್ಕ ಕುಟುಂಬದ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಸಿಕೆರೆ ತಾಲೂಕಿನ ಮೇಲ್ವಿಚಾರಕ ಸೀತಾರಾಮ ಕಾನಾವು ಮಾತನಾಡಿ, ಇಡೀ ಕುಟುಂಬಕ್ಕೆ ಪ್ರೇರಕ ಶಕ್ತಿಯಾಗಿದ್ದ ಸುಂದರ ಕಾನಾವು ಅಣ್ಣನ ಸ್ಥಾನದಲ್ಲಿ ನಿಂತು ನಮ್ಮನ್ನು ಮುನ್ನಡೆಸುತ್ತಿದ್ದರು. ಅವರ ನಿಧನದಿಂದ ನಾವು ನಮ್ಮ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದೇವೆ. ಈ ಹೊತ್ತಲ್ಲಿ ಊರವರು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸುಂದರ ಕಾನಾವು ಅವರನ್ನು ನೆನಪು ಮಾಡಿಕೊಂಡಿದ್ದು ಜತೆಗೆ ನಮ್ಮ ಕುಟುಂಬಕ್ಕೂ ಆತ್ಮ ಸ್ಥೈರ್ಯ ತುಂಬಿರುವುದಕ್ಕೆ ಕೃತಜತೆ ಸಲ್ಲಿಸುವೆ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ವೃತ್ತಿಯಲ್ಲಿ ಎಎಸ್‍ಐ ಆಗಿದ್ದರೂ ಯಾವುದೇ ಅಹಂ ತೋರದೆ ಸರಳ ಸಜ್ಜನಿಕೆಯಿಂದ ಬದುಕಿದವರು ಸುಂದರ ಕಾನಾವು. ಊರಿನ ಬಹುತೇಕರ ಪಾಲಿಗೆ ಅಪರಿಚಿತನಂತೆ ಇದ್ದರು. ತಾನಾಯಿತೂ, ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯ ಮೃದು ಹೃದಯಿಯನ್ನು ಕಳೆದುಕೊಂಡಿರುವುದು ಊರಿಗೆ ಬಹು ದೊಡ್ಡ ನಷ್ಟ ಎಂದರು.

ಊರ ಪ್ರಮುಖರಾದ ಪ್ರಗತಿಪರ ಕೃಷಿಕರಾದ ಸುಬ್ರಾಯ ಭಟ್ ನೀರ್ಕಜೆ, ಮೋಹನ ಬೈಪಡಿತ್ತಾಯ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು-ಪೆರುವಾಜೆ ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಅಂಗನವಾಡಿ ಮೇಲುಸ್ತುವಾರಿ ಸಮಿತಿಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಮಾತನಾಡಿ, ಸುಂದರ ಕಾನಾವು ಅವರ ಬದುಕಿನ ಕ್ಷಣಗಳನ್ನು ಮೆಲುಕು ಹಾಕಿ ವೃತ್ತಿಯಲ್ಲಿ ಮುಂಭಡ್ತಿ ಹೊಂದಿದ್ದ ಅವರನ್ನು ಸಮ್ಮಾನಿಸಬೇಕಿದ್ದ ಹೊತ್ತಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡುವ ಸ್ಥಿತಿ ಬಂದಿರುವುದು ಅತ್ಯಂತ ದುಃಖಕರ ಸಂಗತಿ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಸ್ಮರಿಸುವ ಜತೆಗೆ ಅವರನ್ನು ಸದಾ ನೆನಪಿನಲ್ಲಿಡುವ ಪ್ರಯತ್ನ ಮಾಡೋಣ. ಕಾನಾವು ಕುವೆತ್ತಡ್ಕದ ಕುಟುಂಬದ ಜತೆಗೆ ನಾವೆಲ್ಲರೂ ಇದ್ದೇವೆ ಎಂದರು.

ಕಾನಾವು ಕುವೆತ್ತಡ್ಕ‌ ಕುಟುಂಬದ ಹಿರಿಯರಾದ ಕುಂಞ ದೀಪ ಬೆಳಗಿಸಿದರು. ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು, ವೈದ್ಯ ಡಾ.ರಾಮಕಿಶೋರ್ ಕಾನಾವು, ವಿವಿಧ ಸಂಘಟನೆಗಳ ಪರವಾಗಿ ಮುಕ್ಕೂರು ಸ.ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ, ಕುಂಡಡ್ಕ ನೇಸರ ಯುವಕ ಮಂಡಲದ ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಮುಕ್ಕೂರು ಶ್ರೀ ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಪೆರುವಾಜೆ-ಮುಕ್ಕೂರು ಮೊಗೇರ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಕಾನಾವು, ಅಂಗನವಾಡಿ ಕಾರ್ಯಕರ್ತೆ ರೂಪಾ ಸೇರಿದಂತೆ ಹಲವಾರು ಊರವರು, ಕಾನಾವು ಕುವೆತ್ತಡ್ಕದ ಕುಟುಂಬಸ್ಥರು ಉಪಸ್ಥಿತರಿದ್ದರು.

Advertisement
Previous Post

ಲಯನ್ಸ್ ಪ್ರಾಯೋಜಿತ ಎಂ.ಫ್ರೆಂಡ್ಸ್ ಮೀಲ್ಸ್ ಆನ್ ವ್ಹೀಲ್ಸ್- ಕಾರುಣ್ಯ ಕಿಚನ್ ಉದ್ಘಾಟನೆ : ಎಂ.ಫ್ರೆಂಡ್ಸ್‌ನಿಂದ ಕರುಣೆಯ ಕೆಲಸ – ಅರುಣಾ ಅಭಯ್ ಓಸ್ವಾಲ್

Next Post

ರಾಮನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ : ವಿವಾದ ಹುಟ್ಟು ಹಾಕಿದ ಡಿಎಂಕೆ ಸಚಿವನ ಹೇಳಿಕೆ!

OtherNews

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಯುವತಿಗೆ ವಂಚನೆ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ..!!

July 1, 2025
ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!
ಪುತ್ತೂರು

ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

July 1, 2025
ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ
Featured

ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

June 30, 2025
ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!
Featured

ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

June 29, 2025
ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!
Featured

ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

June 30, 2025
ಪುತ್ತೂರು :  ಆಟೋ ರಿಕ್ಷಾ-ಬೈಕ್ ಡಿಕ್ಕಿ : ನಾಲ್ವರಿಗೆ ಗಾಯ..!!
Featured

ಪುತ್ತೂರು : ಆಟೋ ರಿಕ್ಷಾ-ಬೈಕ್ ಡಿಕ್ಕಿ : ನಾಲ್ವರಿಗೆ ಗಾಯ..!!

June 29, 2025

Leave a Reply Cancel reply

Your email address will not be published. Required fields are marked *

Recent News

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

July 1, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಯುವತಿಗೆ ವಂಚನೆ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ..!!

July 1, 2025
ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

July 1, 2025
ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

July 1, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page