ಪುತ್ತೂರು : ಪ್ರತಿಷ್ಠಿತ ಅನ್ಸಾರುದ್ಧೀನ್ ಜಮಾಅತ್ ಕಮಿಟಿ ಪುತ್ತೂರು ನೇತೃತ್ವದಲ್ಲಿರುವ ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಬಿ.ಹೆಚ್. ಬಪ್ಪಳಿಗೆಯವರು ಆಯ್ಕೆಯಾಗಿದ್ದಾರೆ.

ಅಬ್ದುಲ್ ರಝಾಕ್ ಅಮರ್-ಅಕ್ಬರ್-ಅಂಥೋನಿ ಎಂಬ ಕ್ರಿಕೆಟ್ ಸಂಸ್ಥೆಯನ್ನು ಹುಟ್ಟು ಹಾಕಿ ಎಲ್ಲಾ ಜಾತಿ ಧರ್ಮದವರನ್ನು ಒಟ್ಟು ಗೂಡಿಸಿ, ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನೂ ಸಿಬ್ಬಂದಿಗಳನ್ನೂ ಒಂದೇ ಕಡೆ ಸೇರಿಸಿ ವರ್ಷಂಪ್ರತಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ರಿಕೆಟ್ ಆಟವನ್ನು ನಡೆಸುವುದರ ಜೊತೆಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.