ಪುತ್ತೂರು : ಕರ್ನಾಟಕ ರಾಜ್ಯ ಸುನ್ನೀ ಸ್ಫೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಧ್ವಜ ದಿನ ಕಾರ್ಯಕ್ರಮ ಸೆಪ್ಟೆಂಬರ್ 19ರಂದು ಗುರುವಾರ ಕೆಮ್ಮಾಯಿ ಯುನಿಟ್ ವತಿಯಿಂದ ಎಸ್ ಎಸ್ ಎಸ್ ಎಸ್ ಎಸ್ ಎಫ್ ಕೆಮ್ಮಾಯಿ ಆಫೀಸ್ ಬಳಿ ನಡೆಯಿತು.
ಎಸ್ ಎಸ್ ಎಸ್ ಇಸಾಬ ತಂಡದ ರಾಜ್ಯ ಸಂಚಾಲಕರಾದ ಇಕ್ಬಾಲ್ ಬಪ್ಪಲಿಗೆ, ಕರ್ನಾಟಕ ಮುಸ್ಲಿಂ ಜಮಾತ್ ಕೆಮ್ಮಾಯಿ ಶಾಖಾ ನಾಯಕರಾದ ಶಕೂರ್ ಹಾಜಿ ಕೆಮ್ಮಾಯಿ ಹಾಗು ಎಸ್ ವೈ ಎಸ್ ಕೆಮ್ಮಾಯಿ ಅಧ್ಯಕ್ಷರಾದ ರಹಿಮಾನ್ ಕೆಮ್ಮಾಯಿ ಧ್ವಜಾರೋಹಣ ಮಾಡಿದರು.
ಪ್ರಾಸ್ತವಿಕ ಭಾಷಣವನ್ನು ಮಾಡಿದ ಇಕ್ಬಾಲ್ ಬಪ್ಪಲಿಗೆ ಮಾತನಾಡಿ ಎಸ್ ಎಸ್ ಎಫ್ ನಡೆದು ಬಂದ ದಾರಿ ಎಸ್ ಎಸ್ ಎಫ್ ನಿಂದ ವಿದ್ಯಾರ್ಥಿಗಳಿಗಾಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮಲ್ಲಿ ಎಸ್ ವೈ ಎಸ್ ಕೆಮ್ಮಾಯಿ ಇಸಾಬ ಕಾರ್ಯದರ್ಶಿ ಅಝೀಝ್ ಕೆಮ್ಮಾಯಿ, ಎಸ್ ಎಸ್ ಎಫ್ ಕೆಮ್ಮಾಯಿ ಶಾಖಾ ನಾಯಕರಾದ ಖಿಲ್ರ್ ಕೆಮ್ಮಾಯಿ, ಝಹಿದ್ ಕೆಮ್ಮಾಯಿ, ಬಷೀರ್ ಶಾನ್ ಉಪಸ್ಥಿತರಿದ್ದರು. ಎಸ್ ಎಸ್ ಎಫ್ ಪುತ್ತೂರು ಸೆಕ್ಟರ್ ಪ್ರ.ಕಾರ್ಯದರ್ಶಿ ರಫೀಕ್ ಕೆಮ್ಮಾಯಿ ನಿರೂಪಿಸಿ, ವಂದಿಸಿದರು.