ಕೆಲವು ದಿನಗಳ ಹಿಂದೆ ಮಂಗಳೂರು ಕರಾವಳಿ ಮೈದಾನದಲ್ಲಿ ನಡೆದ ಮಂಗಳೂರು ಪ್ರೊ ಕಬಡ್ಡಿ 2024ರ ಪಂದ್ಯಾಕೂಟದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡುಗೈ ದಾನಿ, ಕ್ರೀಡಾ ಪ್ರೋತ್ಸಾಹಕರಾದ ಗೋವಿಂದ ಬಾಬು ಪೂಜಾರಿ ರವರಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆಕಾಶ್ ಶೆಟ್ಟಿ ರವರು ಕ್ರೀಡಾ ಪ್ರೇಕ್ಷಕರು,ಅಭಿಮಾನಿಗಳು ಹಾಗೂ ಘಟಾನುಘಟಿ ನಾಯಕರ ಮಾತ್ರವಲ್ಲದೆ ವೀಕ್ಷಕರ ಸಮ್ಮುಖದಲ್ಲಿ ಕರಾವಳಿಯಲ್ಲಿ ಬೆಳೆಯುತ್ತಿರುವ ಕಬಡ್ಡಿ ಪ್ರತಿಭೆಗಳ ಕುಂದು ಕೊರತೆಗಳ ಬಗ್ಗೆ ಮತ್ತು ಎದುರಿಸುವ ಸಮಸ್ಯೆಗಳ ಕುರಿತು ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದರು.
ಆ ಸಂದರ್ಭದಲ್ಲಿ ಆಕಾಶ್ ಶೆಟ್ಟಿಯವರನ್ನು ಬೆಂಗಳೂರಿನಲ್ಲಿರುವ ತನ್ನ ಕಚೇರಿಗೆ ಕರೆದು ಈ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡು ಕರಾವಳಿಯ ಕಬಡ್ಡಿ ಪಟುಗಳ ಸಮಸ್ಯೆಗಳನ್ನು ತನ್ನಿಂದ ಸಾಧ್ಯವಾದಷ್ಟು ಸಹಕಾರ ಮಾಡುವೆನು ಎಂದು ಭರವಸೆ ನೀಡಿದ್ದರು. ಆಕಾಶ್ ಶೆಟ್ಟಿ ರನ್ನು ಬೆಂಗಳೂರು ಕಚೇರಿಗೆ ಕರೆದು ಕರಾವಳಿಯಲ್ಲಿ ಬೆಳೆಯುತ್ತಿರುವ ಕಬಡ್ಡಿ ಪಟುಗಳ ಅಭಿವೃದ್ದಿಗೆ,ಅಥವಾ ನಿಮ್ಮ ಬೇಡಿಕೆಗೆ ನಿಮ್ಮೊಂದಿಗೆ ಸದಾ ಸಿದ್ಧನಾಗಿದ್ದೇನೆ ಎಂದು ನೀಡಿದ ಭರವಸೆಯನ್ನು ಈಡೇರಿಸಿ ಕರಾವಳಿಯ ಕಬಡ್ಡಿ ಪಟುಗಳ ಪಾಲಿಗೆ ಇನ್ನಷ್ಟು ಪ್ರೋತ್ಸಾಹ,ಉತ್ಸಾಹ,ಹಾಗೂ ಧೈರ್ಯ ತುಂಬಿದರು.
ಕ್ರೀಡಾಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.