ಪುತ್ತೂರು : ಪಡಿತರ ಅಕ್ಕಿ ಪಡೆಯಲು ರೇಷನ್ ಅಂಗಡಿಗೆ ಬಂದ ಮಹಿಳೆಯೋರ್ವರ ಜೊತೆ ರೇಷನ್ ವಿತರಕ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಿ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ ಘಟನೆ ಕೆಯ್ಯೂರಿನಲ್ಲಿ ನಡೆದಿದೆ.
ಮಹಿಳೆ ಪಡಿತರ ಅಕ್ಕಿ ಪಡೆಯಲು ಕೆಯ್ಯೂರು ರೇಷನ್ ಅಂಗಡಿಗೆ ಬಂದಿದ್ದು, ಈ ವೇಳೆ ರೇಷನ್ ವಿತರಕ ತನ್ನ ಮೈಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಮಹಿಳೆ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಆಪಾದಿತ ವ್ಯಕ್ತಿ ಮಹಿಳೆಯೊಂದಿಗೆ ಕ್ಷಮೆ ಕೇಳುವ ಮುಖಾಂತರ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಲಾಗಿದೆ ಎಂದು ತಿಳಿದು ಬಂದಿದೆ.