ಬಂಟ್ವಾಳ : ರಾಜ್ಯ ಮಟ್ಟದ ಹಿರಿಯ ಕಬಡ್ಡಿ ಆಟಗಾರ ಹಾಗೂ ತೀರ್ಪುಗಾರರಾಗಿದ್ದ ದಾಮೋದರ್ ಪೈ ಮಾಣಿ (66) ಸೆ.30 ರಂದು ಸಂಜೆ ನಿಧನರಾದರು.
ದಾಮೋದರ್ ಪೈ ಅವರು ಕಬಡ್ಡಿ ಆಟದ ಮೂಲಕ ಖ್ಯಾತರಾಗಿದ್ದು, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಆಟವಾಡಿದ್ದರು. ಮಂಗಳೂರಿನ ಲೆಮಿನಾದ ಪ್ರಮುಖ ಆಟಗಾರರಾಗಿದ್ದರು.
ಮಾಣಿ ಯುವಕ ಮಂಡಲದ ಪ್ರಮುಖ ಆಟಗಾರರಾಗಿದ್ದು, ಯುವಕ ಮಂಡಲ ಜಿಲ್ಲಾ, ರಾಜ್ಯಮಟ್ಟದ ಪ್ರಶಸ್ತಿ ಪಡೆಯುವಲ್ಲಿ ದಾಮೋದರ್ ಪೈ ಅವರ ಪಾತ್ರ ಪ್ರಮುಖವಾಗಿತ್ತು.
ಕೆನರಾ ಹೈ ಸ್ಕೂಲ್ ಶಿಕ್ಷಕರಾಗಿದ್ದರು. ಹಾಗೆಯೇ ಮಾಣಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿದ್ದರು. ಹಲವಾರು ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕ್ರೀಡಾಪಟುವಾಗಿ ನೇಮಿಸುವಲ್ಲಿ ದಾಮೋದರ್ ಪೈ ಅವರ ಪಾತ್ರ ಪ್ರಮುಖವಾಗಿದೆ.
ಮೃತರು ಪತ್ನಿ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.