ಧರ್ಮಸ್ಥಳ : ಮನೆಯಲ್ಲಿ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಹಿನ್ನಲೆ ಬಾಲಕನಿಗೆ ಡಿಕ್ಕಿಯಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ನವಫ್ ಇಸ್ಮಾಯಿಲ್ ತಂದೆ ಅಬ್ದುಲ್ ರಹೀಂ ಎಂ. ನೀಡಿದಂತೆ ಪ್ರಕರಣ ದಾಖಲಾಗಿದೆ.
ಅ.1 ರಂದು ಸಂಜೆ ಅಬ್ದುಲ್ ರಹೀಂ ರವರ ತಮ್ಮನಾದ ಅಬ್ಬುಲ್ ಹಮೀದ್ ಎಂಬವರ ಮನೆಯ ಶಿಟೌಟ್ ನಲ್ಲಿ ಅಬ್ಬುಲ್ ಹಮೀದ್ ರವರ ಮಗನಾದ ನವಫ್ ಇಸ್ಮಾಯಿಲ್ ನಿಂತಿದ್ದಾಗ, ಅಬ್ದುಲ್ ಹಮೀದ್ ರವರ ಇನ್ನೊಬ್ಬ ತಮ್ಮನ ಮಗ ಮಹಮ್ಮದ್ ತಬ್ಸೀರ್ ಮನೆಯ ಶೆಡ್ನಲ್ಲಿದ್ದ ಇಕೋ ಕಾರನ್ನು ತೆಗೆಯುವ ವೇಳೆ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನವಫ್ ಇಸ್ಮಾಯಿಲ್ ನಿಗೆ ಡಿಕ್ಕಿ ಹೊಡೆದಿರುತ್ತದೆ.
ಅಪಘಾತದ ಪರಿಣಾಮ ಮಗುವಿಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿದ್ದ ಅಬ್ದುಲ್ ರಹೀಂ ಹಾಗೂ ಮನೆಯ ನೆರೆಕರೆಯವರು ಕೂಡಲೇ ಆಂಬ್ಯುಲೆನ್ಸ್ ಗೆ ಮೂಲಕ ಉಪ್ಪಿನಂಗಡಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ, ನವಫ್ ಇಸ್ಮಾಯಿಲ್ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 67/2024 ಕಲಂ: ಕಲಂ: 106 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.