ವಿಟ್ಲ : ಗಾಂಧಿ ಜಯಂತಿ ಹಾಗೂ ಸ್ವಚ್ಚ ಭಾರತ ಅಭಿಯಾನದ ಪ್ರಯುಕ್ತ ಕಂಬಳಬೆಟ್ಟಿನ ಪ್ರಯಾಣಿಕರ ತಂಗುದಾಣವನ್ನು ಬಿಜೆಪಿ ವಿಟ್ಲಮುಡ್ನೂರು ಹಾಗೂ ಸಿದ್ಧಿ ವಿನಾಯಕ ಯುವಕ ಮಂಡಲ(ರಿ) ಧರ್ಮನಗರ ಕಂಬಳಬೆಟ್ಟು ಇದರ ಸಹಯೋಗದೊಂದಿಗೆ ಸ್ವಚ್ಚಗೊಳಿಸಿದರು.
ಈ ಸಂದರ್ಭ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರ್, ಶಕ್ತಿಕೇಂದ್ರ ಸಂಚಾಲಕರಾದ ಯಶೋದರ ಪಟ್ಲ, ಗ್ರಾಮಾಂತರ ಮಂಡಲ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಮರುವಾಳ, ಪಂಚಾಯತ್ ಉಪಾಧ್ಯಕ್ಷರಾದ ರೋಹಿನಿ, ಸದಸ್ಯರಾದ ಮಹಾಭಲೇಶ್ವರ ಭಟ್, ಪ್ರೇಮಲತಾ ಹಾಗೂ ಸಿದ್ಧಿ ವಿನಾಯಕ ಯುವಕ ಮಂಡಲದ ಅಧ್ಯಕ್ಷರು ವಿಶ್ವನಾಥ ಕಟ್ಟೆಜಾಲು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.