ಪುತ್ತೂರು: ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ ಸರಿಪಡಿಸದೆ ಇರುವ ಕಾರಣ ವಿಭಿನ್ನ ರೀತಿಯ ಬ್ಯಾನರ್ ಅಳವಡಿಸಿರುವ ಘಟನೆ ತಿಂಗಳಾಡಿ ಎಂಬಲ್ಲಿ ನಡೆದಿದೆ.
ಬ್ಯಾನರ್ ನಲ್ಲಿ “ಸರಕಾರದ ಗಮನಕ್ಕೆ…ನಮ್ಮ ತಿಂಗಳಾಡಿ ದರ್ಬೆಯಿಂದ ಬೋಳೋಡಿ ವರಿಗಿನ ರಸ್ತೆ ಅನೇಕ ವರ್ಷಗಳಿಂದ ಗುಂಡಿಗಳಾಗಿದೆ ಯಾವ ಸರ್ಕಾರ ಬಂದರೂ ನೀವು ಸರಿ ಮಾಡುವುದು ಇಲ್ಲಿಯವರೆಗೂ ಕಾಣಲಿಲ್ಲ ಈ ರಸ್ತೆಯಲ್ಲಿ ವಾಹನ ಬಿಟ್ಟು ಮನುಷ್ಯರಿಗೆ ಹೋಗಲು ತುಂಬಾ ಕಷ್ಟ ಆಗಿದೆ ಅದಕ್ಕೆ ಈ ವರ್ಷದಿಂದ ಬಾಳೆ ಗಿಡ ಮತ್ತು ಅಡಿಕೆ ಗಿಡ ನೆಡುವ ಕಾರ್ಯಕ್ರಮ ಇಟ್ಟಿದ್ದೇವೆ. ಇದಕ್ಕೆ ನಮ್ಮ ಪಂಚಾಯತಿ ಸದಸ್ಯರು ಎಲ್ಲರೂ ಬಂದು ಮಾಡಬೇಕೆಂದು ವಿನಂತಿ!! ಇಂತಿ ನಿಮ್ಮ ಮಾತಾಬಾಂಧವರು” ಎಂದು ಬರೆಯಾಗಿದೆ.
ಸದ್ಯ ಈ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.