ಪಾಣಾಜೆ ಗ್ರಾಮದ ದೇವಸ್ಯ ಉದಯ ಕುಮಾರ್ ಮಣಿಯಾಣಿ ರವರ ಮನೆಯ ಮೇಲ್ಚಾವಣಿಯು ಸಂಪೂರ್ಣ ಶಿತಿಲಾವಸ್ಥೆಯಲ್ಲಿದ್ದು ವಾಸಕ್ಕೆ ಯೋಗ್ಯವಲ್ಲದ ಕಾರಣ ಈ ಮನೆಯ ದುರಸ್ತಿ ಯ ಕಾರ್ಯವನ್ನು ಅಟಲ್ ಜನ್ಮ ಶತಾಬ್ದಿ ಯ ಪ್ರಯುಕ್ತ ಪುತ್ತಿಲಪರಿವಾರ ಸೇವಾ ಟ್ರಸ್ಟ್ (ರಿ) ವಹಿಸಿಕೊಳ್ಳುವ ಸಂಕಲ್ಪ ಮಾಡಲಾಯಿತು.

ಪುತ್ತಿಲಪರಿವಾರ ಸೇವಾ ಟ್ರಸ್ಟ್ (ರಿ) ಸಂಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ,ಬಾ,ಜ,ಪ ಮಂಡಲ ಪ್ರದಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು,ನೆಕ್ಕಿಲಾಡಿ ಪಂಚಾಯತ್ ಮಾಜಿ ಅದ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ,ಬಾ.ಜ.ಪ ಎಸ್,ಸಿ ಮೋರ್ಛ ಪ್ರದಾನ ಕಾರ್ಯದರ್ಶಿ ಸುಜಿತ್ ಕಜೆ,ಪಾಣಾಜೆ ಬಾ,ಜ,ಪ ಶಕ್ತಿಕೇಂದ್ರ ಸಂಚಾಲಕ ಪ್ರೇಮ್ ರಾಜ್ ಆರ್ಲಪದವು, ಬಾ,ಜ,ಪ ಮಂಡಲ ಯುವ ಮೋರ್ಛ ಕಾರ್ಯಕಾರಣಿ ಸದಸ್ಯ ಪ್ರದೀಪ್ ಪಾಣಾಜೆ, ಪಾಣಾಜೆ ಬಾ.ಜ.ಪ ಬೂತ್ ಪ್ರಮುಖರುಗಳಾದ ಪಷ್ಪರಾಜ ರೈ ಕೋಟೆ, ಸಂದೀಪ್ ಕೆ. ಕೀರ್ತಿರಾಜ್ ಉಡ್ಡಂಗಳ
ಪಾಣಾಜೆ ಕೃಷಿಪತ್ತಿನ ಸಹಾಕಾರಿ ಸಂಘದ ನಿರ್ದೇಶಕ ಹರೀಶ್ ಕಡಮಾಜೆ,ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸದಸ್ಯರುಗಳಾದ ವಸಂತ ಕುಮಾರ್ ಭರಣ್ಯ,ಸುಖಿನ್ ರಾಜ್ ಪಾಣಾಜೆ ,ಜಾನು ನಾಯ್ಕ ಭರಣ್ಯ,
ಮುಂತಾದ ಪ್ರಮುಖರು ಮನೆಗೆ ಬೇಟಿ ನೀಡಿ ಯೋಜನೆಯ ಬಗ್ಗೆ ಪರಿಶೀಲಿಸಿದರು.
