ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ಉಗ್ರರು ಮತ್ತೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಒಟ್ಟು 26 ಪ್ರವಾಸಿಗರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ ಜೀವ ತೆಗೆದಿದ್ದಾರೆ. ಭೀಕರ ಕೃತ್ಯದಲ್ಲಿ ಗಾಯಗೊಂಡವರು ಅದೆಷ್ಟೋ. ಈ ರಾಕ್ಷಸೀ ಕೃತ್ಯದಲ್ಲಿ ಓರ್ವ ದೇಶ ಸೇವಕ ನೌಕಾಸೇನಾ ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಬೇಸರ ವಿಚಾರ ಏನೆಂದರೆ ಅವರಿಗೆ ಕೇವಲ 7 ದಿನದ ಹಿಂದಷ್ಟೇ ಮದುವೆ ಆಗಿತ್ತು.. ಹನಿಮೂನ್ ಅಂತಾ ಬಂದು ಜೀವ ಕಳೆದುಕೊಂಡಿದ್ದಾರೆ.
ಹೆಸರು ವಿನಯ್ ನರ್ವಾಲ್ ಜೀವ ಕಳೆದುಕೊಂಡ ನೌಕಾಪಡೆಯ ಅಧಿಕಾರಿ. ವಯಸ್ಸು ಕೇವಲ 26. ಕಳೆದ 7 ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. ಏಪ್ರಿಲ್ 19ಕ್ಕೆ ಆರತಕ್ಷತೆ ಮುಗಿಸಿದ್ದ ನರ್ವಾಲ್ ದಂಪತಿ, ನಂತರ ಹನಿಮೂನ್ಗೆ ಅಂತಾ ಜಮ್ಮು-ಕಾಶ್ಮೀರಕ್ಕೆ ತೆರಳಿತ್ತು. ಅಂತೆಯೇ ಅನಂತಪುರ ಜಿಲ್ಲೆಯ ಪಹಲ್ಗಾಮ್ನಲ್ಲಿ ಇಬ್ಬರು ಭೇಲ್ ಪುರಿ ತಿನ್ನುತ್ತಿದ್ದಾಗ ಪೈಶಾಚಿಕ ಕೃತ್ಯ ನಡೆದಿದೆ.
ಇದೇ ಶಾಕ್ನಲ್ಲಿ ಮಾತಾಡಿದ ವಿನಯ್ ನರ್ವಾಲ್ ಪತ್ನಿ, ನಾವು ಭೇಲ್ ಪುರಿ ತಿನ್ನುತ್ತಿದ್ದೆವು. ಅಲ್ಲಿಗೆ ಬಂದ ಉಗ್ರ ಪತಿಯ ಮೇಲೆ ದಾಳಿ ಮಾಡಿದ ಎಂದು ಕಣ್ಣೀರು ಇಟ್ಟಿದ್ದಾಳೆ. ಮೃತ ವಿನಯ್ ನರ್ವಾಲ್ ನೌಕಾಪಡೆಯ ಅಧಿಕಾರಿ. ಕಳೆದ ಎರಡು ವರ್ಷಗಳಿಂದ ಕೊಚ್ಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 16 ರಂದು ವಿನಯ್ ನರ್ವಾಲ್ ಮದುವೆ ಆಗಿದ್ದರು.