ಪುತ್ತೂರು: ಹಿಂದೂ ಸಂಘಟನೆಗಳ ಮಾಹಿತಿಯ ಮೇರೆಗೆ ಪರ್ಲಡ್ಕದ ಬೀಗ ಹಾಕಿದ ಕೋಣೆ ಯೊಂದರಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.
ಕಡಬ ತಾಲೂಕಿನ ಮಹಿಳೆಯೊಬ್ಬರು ಸವಣೂರಿನ ಯುವಕನೊಂದಿಗೆ ಆತ್ಮೀಯತೆ ಹೊಂದಿದ್ದು ಪುತ್ತೂರಿನ ಪರ್ಲಡ್ಕ ದ ಕೊಠಡಿಗೆ ಬಂದಿದ್ದಳು. ಕತ್ತಲೆಗೆ ಯುವಕ ಮನೆಗೆ ಹೋಗುವುದಾಗಿ ಹೇಳಿ ಬೀಗ ಹಾಕಿ ಹೋಗಿದ್ದಾನೆ.
ತುಸು ಸಮಯದ ಬಳಿಕ ಬೇರೊಬ್ಬರು ಅಲ್ಲಿಗೆ ಬಂದಾಗ ಬೀಗ ಹಾಕಿರುವುದು ಕಂಡು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ಪೊಲೀಸರು ಬೀಗ ಹಾಕಲಾಗಿದ್ದ ಕೊಠಡಿಯಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.