ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಉಮೇಶ್ ಆರ್ಕಲ್ ತೋಟ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ್ ಯಾನೆ ಪುರುಷೋತ್ತಮ ಸುವರ್ಣ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಲ್ಯಣ್ಣ ಪೂಜಾರಿರವರು ಅಂತಿಮ ಕಣದಲ್ಲಿದ್ದಾರೆ.
ಸದಸ್ಯ ಸ್ಥಾನಕ್ಕೆ ಮೇ 25ರಂದು
ಸಾಮಾನ್ಯ ಮೀಸಲು ಈ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಯತೀಶ್ ಯಾನೇ ಪುರುಷೋತ್ತಮ ಸುವರ್ಣ ಹಾಗೂ ಪ್ರಶಾಂತ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಲ್ಯಣ್ಣ ಪೂಜಾರಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ನಾರಾಯಣ ಪೂಜಾರಿ ಎಸ್.ಕೆ. ನಾಮಪತ್ರ ಸಲ್ಲಿಸಿದ್ದರು.
ಈ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಶಾಂತ್ ಹಾಗೂ ಪಕ್ಷೇತರ ಅಭ್ಯರ್ಥಿ ನಾರಾಯಣ ಪೂಜಾರಿ ಎಸ್.ಕೆ., ರವರು ನಾಮಪತ್ರ ಹಿಂಪಡೆದಿದ್ದರು.
ಒಟ್ಟು 861 ಮತದಾರರಿದ್ದು, ಅದರಲ್ಲಿ 413 ಗಂಡಸರು ಹಾಗೂ 448 ಮಹಿಳಾ ಮತದಾರರಿದ್ದಾರೆ.