ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ವಿಳಂಬವಾಗುತ್ತಿದ್ದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಟ್ರೋಲಿಗರ ಬಾಯಿಗೆ ಆಹಾರವಾಗಿದ್ದೇ ಹೆಚ್ಚು. ಅಷ್ಟೇ ಅಲ್ಲದೇ, ಪಂಪ್ವೆಲ್ ಫ್ಲೈ ಓವರ್ ಉದ್ಘಾಟನೆಯಾದ ಬಳಿಕವೂ ನಳಿನ್ ಕುಮಾರ್ ಕಟೀಲ್ ಅವರ ಕಾಲೆಳೆಯುವುದನ್ನು ಟ್ರೋಲಿಗರು ನಿಲ್ಲಿಸಿರಲಿಲ್ಲ. ಆದರೆ ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹರವರು, ಇಂದು ಚಂದದ ಕಲ್ಲಡ್ಕ ಫ್ಲೈ ಓವರ್ ನಿರ್ಮಾಣವಾಯಿತಲ್ಲ. ಈ ನಳಿನ್ ಕುಮಾರ್ ಕಟೀಲ್ ಮಾಡಿದ ಕೆಲಸಕ್ಕೆ ಥ್ಯಾಂಕ್ಸ್ ಹೇಳಿ ಎಂದಿದ್ದಾರೆ. ಹೌದು, ಮಾಜಿ ಸಂಸದ ಪ್ರತಾಪ್ ಸಿಂಹ ರವರ ಈ ಪೋಸ್ಟ್ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ನ್ನು ಮಾಡಿದ್ದಾರೆ.
ಖಾತೆಯಲ್ಲಿ ಕಲ್ಲಡ್ಕ ಫ್ಲೈ ಓವರ್ ಬಗ್ಗೆ ಪೋಸ್ಟ್ವೊಂದು ಶೇರ್ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಪಂಪ್ವೆಲ್ ಸರ್ಕಲ್ನಲ್ಲಿ ನೀರು ತುಂಬಿದಾಗ ನಳಿನ್ ಕುಮಾರ್ ಕಟೀಲರನ್ನು ಹೀಗಳೆದು ಮೀಮ್ ಮಾಡಿದ್ರಿ, ಸತತ ಮಳೆಯಿಂದ ರಸ್ತೆ ಕಾಮಗಾರಿ ವಿಳಂಬವಾದಾಗಲೂ ಕಟೀಲೆ ಕಾರಣವೆಂದು ಟೀಕಿಸಿದಿರಿ, ಕಲ್ಲಡ್ಕದಲ್ಲಿ ಚೆಂದದ ಪ್ರೈಓವರ್ ನಿರ್ಮಾಣವಾಯಿತಲ್ಲ ಈಗೇಕೆ ಕಂಜೂಸಿಗಳಾಗಬೇಕು. ಬೇರೆಯವರು ಟೇಪು ಕಟ್ಟು ಮಾಡಬಹುದು, ಕಾಮಗಾರಿ ತಂದವರು ಕಟೀಲ್ ಅಲ್ಲವೇ. ನಳಿನ್ ಅವರಿಗೊಂದು ಥ್ಯಾಂಕ್ಯೂ ಹೇಳೋಣವೇ… ಎಂದು ಬರೆಯಲಾಗಿದೆ.
https://www.facebook.com/share/v/15mtUTpCwm
