ಪುತ್ತೂರು : ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸಾವಿನ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ರೈ ರವರ ಪುತ್ರ ಕಸ್ಬಾ ಗ್ರಾಮದ ನಿವಾಸಿ ವಿನೇಶ್ ರೈ (24) ಎಂಬವರ ಮಾಹಿತಿ ಮೇರೆಗೆ ಪ್ರಕರಣ ದಾಖಲಾಗಿದೆ.
ರಮೇಶ್ ಅವರ ಮೊಬೈಲ್ ಪೋನ್ ಮತ್ತು ಬೈಕ್ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಪಾಣೆಮಂಗಳೂರು ಹಳೇ ಸೇತುವೆ ನೇತ್ರಾವತಿ ನದಿ ದಡದಲ್ಲಿರುವ ಮಾಹಿತಿ ಬಂದ ಮೇರೆಗೆ, ಸದ್ರಿ ಸ್ಥಳಕ್ಕೆ ತೆರಳಿ ನೋಡಿದಾಗ, ಅವರ ಬೈಕ್, ಮೊಬೈಲ್ ಸೇರಿದಂತೆ ಇತರ ಸೊತ್ತುಗಳು ಸದ್ರಿ ಸ್ಥಳದಲ್ಲಿ ಕಂಡುಬಂದಿರುತ್ತದೆ. ಸ್ಥಳೀಯರು ಹಾಗೂ ಅಗ್ನಿಶಾಮಕದಳದವರು ನದಿಯ ಪರಿಸರದಲ್ಲಿ ಹುಡುಕಲಾಗಿ,ಅವರ ಮೃತದೇಹ ನೇತ್ರಾವತಿ ನದಿ ತೀರದಲ್ಲಿರುವ ನೀರಿನ ಟ್ಯಾಂಕಿನಲ್ಲಿ ಪತ್ತೆಯಾಗಿರುತ್ತದೆ ಮತ್ತು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 30/2025 ಕಲಂ: 194 BNSS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.