ಪುತ್ತೂರು: ಅಮ್ಮನನ್ನು ಕಳೆದುಕೊಂಡು ಇದೀಗ ಅತ್ತೆಯ ಆಶ್ರಯದಲ್ಲಿ ಬರುಕುತ್ತಿರುವ ಅರಿಯಡ್ಕ ಗ್ರಾಮದ ಶೇಕಮಲೆಯ ಬಾಲಕನೋರ್ವನಿಗೆ ಶಾಸಕ ಅಶೋಕ್ ರೈ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.
ಶೇಕಮಲೆ ನಿವಾಸಿ ಲಲಿತಾ ಎಂಬವರ ಪುತ್ರ ಪುನೀತ್ ರೈ ಅನಾಥ ಬಾಲಕ. ಈತನ ತಾಯಿ ಕಳೆದ ಜನವರಿ ತಿಂಗಳಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದರು. ಅ ಬಳಿಕ ಪುನೀತ್ ಅನಾಥನಾಗಿದ್ದ , ಆತನಿಗೆ ಅತ್ತೆ ಆಸರೆ ನೀಡಿದ್ದರು. ತಂದೆ ಇದ್ದರೂ ಮಗನ ಆರೈಕೆ ಮಾಡುತ್ತಿರಲಿಲ್ಲ.
ಈ ವಿಚಾರವನ್ನು ಬಾಲಕ ಪುನೀತ್ ಶಾಸಕ ಅಶೋಕ್ ರೈ ಅವರಲ್ಲಿ ಹೇಳಿಕೊಂಡಿದ್ದಾನೆ. ಸೋಮವಾರ ಶಾಸಕರ ಕಚೇರಿಗೆ ಬಂದ ಬಾಲಕನು ನಾನು ವಸತಿ ಶಾಲೆಯಲ್ಲಿ ಕಲಿಯಲು ಇಚ್ಚಿಸಿದ್ದು ನನಗೆ ವಸತಿ ಶಾಲೆಯಲ್ಲಿ ಪ್ರವೇಶ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾನೆ.
ಬಾಲಕನ ಮನವಿಗೆ ಸ್ಪಂದಿಸಿದ ಶಾಸಕರು ವಸತಿ ಶಾಲೆಯಲ್ಲಿ ಪ್ರವೇಶಾತಿ ಜೊತೆಗೆ ನಿನಗೆ ಕಲಿಯಲು ಏನೆಲ್ಲಾ ವ್ಯವಸ್ಥೆಗಳು ಬೇಕು ಅದೆಲ್ಲವನ್ನೂ ನಾನು ಒದಗಿಸುತ್ತೇನೆ. ಪುಸ್ತಕ, ಯುನಿಫಾರಂ ನಾನು ನೀಡುವುದಾಗಿ ಶಾಕರು ತಿಳಿಸಿದರು.