ಪುತ್ತೂರು: ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಪುತ್ತೂರಿನ ನಿಡ್ಪಳ್ಳಿ ಗ್ರಾಮದಲ್ಲಿ ನಡೆದಿದೆ.

ನಿಡ್ಪಳ್ಳಿ ಗ್ರಾಮದ ಕುಕ್ಕುಪುಳಿ ಪಟ್ಟೆಮನೆ ರಾಮಣ್ಣ ಪೂಜಾರಿ ಎಂಬವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಮನೆಯಲ್ಲಿ ವಾಸವಿದ್ದವರು ಅಪಾಯದಿಂದ ಪಾರಾಗಿದ್ದು ಮನೆ ಹಿಂಬದಿಯ ಸ್ನಾನದ ಕೊಠಡಿಗೆ ಅಳವಡಿಸಲಾಗಿದ್ದ ಶೀಟ್ ಸಂಪೂರ್ಣ ಹಾನಿಯಾಗಿದ್ದು ಸ್ವಿಚ್ ಬೋರ್ಡ್ ಗೋಡೆಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.