ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಆ.8 ರಂದು ನಡೆಯುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಸುಭದ್ರಾ ಕಲಾ ಮಂದಿರದಲ್ಲಿ ಜೂ.8ರಂದು ನಡೆಯಿತು.
ವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವಾಧ್ಯಕ್ಷರಾಗಿ ರಜತಾ ಗಿರೀಶ್ ಭಟ್, ಗೌರವ ಸಲಹೆಗಾರರಾಗಿ ಶಾರದಾ ಪ್ರಭು, ಕಿಶೋರಿ ಕಿಶೋರ್, ರೇವತಿ ಜೇನುಗೂಡು, ಸಂಚಾಲಕರಾಗಿ ಪುಷ್ಪಾ ರಾಜೇಶ್, ಅಧ್ಯಕ್ಷರಾಗಿ ಪ್ರೇಮಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಅನ್ನಪೂರ್ಣ ಬಲ್ಲಾಳ್, ಉಪಾಧ್ಯಕ್ಷರಾಗಿ ಪವಿತ್ರ, ವೀಣಾ, ಸ್ಮಿತಾ, ಪ್ರೇಮ ಮುಂಡೂರು, ರಾಜೀವಿ, ಕಾರ್ಯದರ್ಶಿಗಳಾಗಿ ಪುಷ್ಪ ಆಚಾರ್ಯ, ಸ್ವಾತಿ, ವಿನಯ, ಅರುಣಾ, ತಾರಾ ಬಲ್ಲಾಳ್, ಶ್ವೇತಾ ಹಾಗೂ 50ಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನು ನೇಮಕ ಮಾಡಲಾಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ನಿರ್ದೇಶಕ ಉಮೇಶ್ ಗೌಡ ಕೋಡಿಬೈಲು, ಅನಿಲ್ ಗೌಡ ತೆಂಕಿಲ, ಸದಸ್ಯರುಗಳಾದ ಹರೀಶ್ ಮರುವಾಳ, ಸುಜಿತ್ ಕಜೆ, ಗಣೇಶ್ ಮುಕ್ರಂಪಾಡಿ, ಉದಯ ಬಲ್ಲಾಳ್, ಗಿರೀಶ್ ನರಿಮೊಗರು, ಹರೀಶ್ ಮುಂಡೂರ್, ಪ್ರವೀಣ್ ಶೆಟ್ಟಿ ತಿಂಗಳಾಡಿ, ಮಂಜುನಾಥ ಕೆದಂಬಾಡಿ, ಮಹಾಬಲ ಕೆಮ್ಮಾಯಿ, ಶ್ಯಾಮ್, ಜಯಂತ, ಕಿಶೋರ್ ನಗರ, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತಿಲ ಪರಿವಾರಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.